Breaking News

ಕೇಂದ್ರ ಸಚಿವ ಡಾ.ಭಾಗವತ್ ಕರದ್. huminality

Spread the love

ಇಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಯಾಕೆ ಬರೋದಿಲ್ಲ ಅಂತ ಗೊತ್ತಿಲ್ಲ..

ನೆನ್ನೆ ಆಕಾಶದಲ್ಲಿ ಹಾರುತ್ತಿದ್ದ ಇಂಡಿಗೋ ವಿಮಾನದ, 12 ಎ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ತುರ್ತಾಗಿ ಅನಾರೋಗ್ಯಕ್ಕೆ ಒಳಗಾದರು, ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಅವರು ಏಕಕಾಲದಲ್ಲಿ ಇತರ ಕೆಲವು ಆರೋಗ್ಯದ ಸಮಸ್ಯೆಗಳನ್ನು ಎದುರಿಸಿದರು.

ಆ ಸಮಯದಲ್ಲಿ ಒಬ್ಬರೇ ಒಬ್ಬರು ವೈದ್ಯರು ಮಾತ್ರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು, ಆ ವೈದ್ಯರೇ ಕೇಂದ್ರ ಸಚಿವ ಡಾ.ಭಾಗವತ್ ಕರದ್.

ಕೇಂದ್ರ ಸಚಿವರು, ತಮ್ಮ ಮಂತ್ರಿ ಎಂಬ ಅಹಂಕಾರವನ್ನು ಬಿಟ್ಟು, ಸುಮಾರು ಅರ್ಧ ಗಂಟೆ ವೈದ್ಯನಂತೆ ಆ ರೋಗಿಗಾಗಿ ಶ್ರಮಿಸಿದರು. ವಿಮಾನದಲ್ಲಿದ್ದ ಕೆಲವು ತುರ್ತು ಔಷಧಿಗಳು ಮತ್ತು ಚುಚ್ಚುಮದ್ದು ನೀಡಲಾಯಿತು, ರೋಗಿಯ ಸ್ಥಿತಿಯು ಬಹಳ ಮಟ್ಟಿಗೆ ಹತೋಟಿಗೆ ಬಂತು..

ವಿಮಾನ ಲ್ಯಾಂಡ್ ಆಗುತ್ತಿದ್ದ ಹಾಗೆ ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು, ಕೇವಲ 1 ದಿನದ ನಂತರ ರೋಗಿಯನ್ನು ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಇವತ್ತು ಆ ರೋಗಿ ಹಾಗೂ ಆತನ ಇಡೀ ಕುಟುಂಬ ಕೇಂದ್ರ ಸಚಿವ ಡಾ.ಭಾಗವತ್ ಕರದ್ ಅವರಿಗೆ ಧನ್ಯವಾದ ಅರ್ಪಿಸುತ್ತಿದೆ, ವೈದ್ಯರು ವಿಮಾನದಲ್ಲಿ ಇರದೇ ಇದ್ದಿದ್ದರೆ ಆ ರೋಗಿಯ ಜೀವ ಉಳಿಸಲು ಸಾಧ್ಯವೇ ಇರಲಿಲ್ಲ..

Well Done Dr Karad Sir…


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ