Breaking News

ಜುಬ್ಲಿಯಂಟ್, ಜಿಂದಾಲ್ ಆಯ್ತು ಈಗ ಟಾಟಾ ಮಾರ್ಕೋಪೊಲೊ ಕಂಪನಿಗೂ ಕೊರೊನಾ ಕಂಟಕ

Spread the love

ಧಾರವಾಡ: ಮೈಸೂರಿನ ಜುಬ್ಲಿಯಂಟ್, ಬಳ್ಳಾರಿಯ ಜಿಂದಾಲ್ ಆಯ್ತು. ಈಗ ಧಾರವಾಡದ  ಟಾಟಾ ಮಾರ್ಕೋಪೊಲೊ ಕಂಪನಿಗೂ ಕೊರೊನಾ ಕಂಟಕ ಆರಂಭವಾಗಿದೆ.

ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದ 3500 ಕಾರ್ಮಿಕರು ಕೆಲಸ ಮಾಡುವ ಮಾರ್ಕೋಪೊಲೊ ಕಂಪನಿಯ 8 ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಈಗ ಉಳಿದ ಕಾರ್ಮಿಕರಿಗೂ ಕೊರೊನಾ ಆತಂಕ ಎದುರಾಗಿದೆ.

ಇಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿದ್ದರಿಂದ ಜಿಲ್ಲಾಡಳಿತ 10 ದಿನಗಳ ಕಾಲ ಜಿಲ್ಲೆಯಲ್ಲಿ ಲಾಕಡೌನ್ ಮಾಡಿ ಆದೇಶ ಮಾಡಿದೆ. ಈ ಹಿನ್ನೆಲೆ ಮಾರ್ಕೋಪೊಲೊ ಕಂಪನಿಯಲ್ಲಿ ಸಹ 3500 ಕಾರ್ಮಿಕರಲ್ಲಿ ಕೇವಲ 1 ಸಾವಿರ ಕಾರ್ಮಿಕರು ಮಾತ್ರ ಕೆಲಸ ಬರುತಿದ್ದರು. ಇದರಲ್ಲಿ 8 ಜನರಿಗೆ ಸೋಂಕು ತಗುಲಿದೆ.

ಈ 8 ಜನರು ಕಂಪನಿಯ ಅಕ್ಕಪಕ್ಕದ ಹಳ್ಳಿಗಳಿಂದ ಕೆಲಸಕ್ಕೆ ಬರುತಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಕಂಪನಿಯಲ್ಲಿ ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಧಾರವಾಡದ ಹಿರಿಯ ಪತ್ರಿಕಾ ಫೋಟೋಗ್ರಾಫರ್ ಆರ್ ಕೆ ( ರಾಮಚಂದ್ರ ಕುಲಕರ್ಣಿ) ಇನ್ನಿಲ್ಲ

Spread the loveಧಾರವಾಡ: ಆರ್ ಕೆ ಖ್ಯಾತಿಯ ಹಿರಿಯ ಪತ್ರಿಕಾ ಪೋಟೋಗ್ರಾಫರಾಗಿ ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿದ್ದ ರಾಮಚಂದ್ರ ಕುಲಕರ್ಣಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ