Breaking News

ಸುಧಾಕರ್​​​ಗೆ ಒಂದೇ ಮತ ಹೆಚ್ಚು ಬಂದ್ರೂ ರಾಜೀನಾಮೆ ನೀಡುವೆ: ಪ್ರದೀಪ್ ಈಶ್ವರ್

Spread the love

ಬೆಂಗಳೂರು: ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಪಕ್ಕಾ ಗೆಲ್ತಾರೆ..ಬಿಜೆಪಿ ಅಭ್ಯರ್ಥಿ ಸುಧಾಕರ್​ ಅವರು ಒಂದೇ ಒಂದು ಮತ ಹೆಚ್ಚು ಪಡೆದರೆ, ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರದೀಪ್​ ಈಶ್ವರ್​ ಸವಾಲು ಹಾಕಿದ್ದಾರೆ.

ಅಲ್ಲದೇ ತಮ್ಮ ರಾಜೀನಾಮೆ ಮಾತಿಗೆ ಬದ್ಧನಾಗಿರುತ್ತೇನೆ ಎಂದೂ ತಿಳಿಸಿದ್ದಾರೆ.

Pradeep Eshwar: ಸುಧಾಕರ್​​​ಗೆ ಒಂದೇ ಮತ ಹೆಚ್ಚು ಬಂದ್ರೂ ರಾಜೀನಾಮೆ ನೀಡುವೆ: ಪ್ರದೀಪ್ ಈಶ್ವರ್ ಸವಾಲ್

ಇತ್ತೀಚೆಗೆ ಮಾಜಿ ಸಚಿವ ಸುಧಾಕರ್​​ ಅವರು ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚಿಕ್ಕಬಳ್ಳಾಪುರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿದಿದೆ ಎಂದಿದ್ದ ಮಾತಿಗೂ ಈಶ್ವರ್​ ಟಕ್ಕರ್ ಕೊಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,

 

ಈ ಸಲ 10ನೇ ತರಗತಿಯ ಪರೀಕ್ಷೆಗಳು ಕಟ್ಟುನಿಟ್ಟಾಗಿ ನಡೆದಿವೆ. ಸಿಸಿ ಕ್ಯಾಮೆರಾ ಹಾಕಿ ಪರೀಕ್ಷೆ ನಡೆಸಲಾಗಿದೆ. ಈ ಹಿಂದಿನಂತೆ ಮಾಸ್ ಕಾಪಿ ಹೊಡೆಯೋಕೆ ಬ್ರೇಕ್​ ಹಾಕಲಾಗಿತ್ತು. ಹಾಗಾಗಿ ಈ ಸಲ ಮಾಸ್ ಕಾಪಿ ಆಗಿಲ್ಲ.

ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆಯು 2ಸ್ಥಾನಕ್ಕೆ ಬಂದಿದೆ. ಹಿಂದೆ 5ನೇ ಸ್ಥಾನದಲ್ಲಿತ್ತು. ಆದ್ದರಿಂದ ಫಲಿತಾಂಶ ಕುಸಿದಿದೆ ಎನ್ನಬೇಡಿ ಎಂದು ಸುಧಾಕರ್​​ಗೆ ತಿರುಗೇಟು ನೀಡಿದ್ದಾರೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ