Breaking News

ಉರಗ ಪ್ರೇಮಿಯೊಬ್ಬರು ಹಾವಿನ ಮೊಟ್ಟಗೆ ಕೃತಕ ಕಾವು ಕೊಟ್ಟು 12 ಮರಿ ಹಾವುಗಳ ಸುರಕ್ಷಿತ ಜನನ ಮಾಡಿಸಿದ್ದಾರೆ.

Spread the love

ಬೆಳಗಾವಿ: ಕಂದಾನಗರಿಯ ಉರಗಪ್ರೇಮಿಯೊಬ್ಬರು ಹಾವಿನ ಮೊಟ್ಟೆಗೆ ಕೃತಕವಾಗಿ ಕಾವು ಕೊಟ್ಟು ಸುರಕ್ಷಿತ ಜನನ ಮಾಡಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

ಬೆಳಗಾವಿ ತಾಲೂಕಿನ ಹಲಗಾ ಬಸ್ತವಾಡ ಗ್ರಾಮದ ರಾಮಾ ಪಾಟೀಲ್​ ಎಂಬ ಉರಗ ಪ್ರೇಮಿ ಹಾವಿನ ಮರಿಗಳ ಸುರಕ್ಷಿತ ಜನನಕ್ಕೆ ಕಾರಣರಾಗಿದ್ದಾರೆ.

ಹಾವು ಕಂಡ ತಕ್ಷಣ ಭಯದಿಂದ ಮಾರುದ್ದ ಓಡುವ ಜನರ ಮಧ್ಯೆ ಅವುಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಕಾಪಾಡುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಈ ಬಗ್ಗೆಜೊತೆಗೆ ಮಾತನಾಡಿದ ರಾಮಾ ಪಾಟೀಲ, ಎರಡು ತಿಂಗಳ ಹಿಂದೆ ರಾತ್ರಿ ಹೊತ್ತು ನಾಗರ ಹಾವನ್ನು ರಕ್ಷಿಸಿ ಮನೆಗೆ ತಂದಿದ್ದೆ. ಬೆಳಗ್ಗೆ ನೋಡಿದರೆ 20 ಮೊಟ್ಟೆಗಳನ್ನು ಆ ಹಾವು ಹಾಕಿತ್ತು.

ಈ ಮೊಟ್ಟೆಗಳನ್ನು ಎಲ್ಲಿಯೂ ಬಿಸಾಕುವುದು ಬೇಡವೆಂದು ಮನೆಯಲ್ಲೇ ಪ್ರಯೋಗ ಮಾಡಬೇಕೆಂದು ನಿಶ್ಚಯಿಸಿದೆವು. ಬಳಿಕ ನಾಗರ ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದೆ. 20 ಮೊಟ್ಟೆಗಳನ್ನು ಒಂದು ಚೀಲದಲ್ಲಿ ಹಾಕಿ 30-40 ಡಿಗ್ರಿ ಉಷ್ಣಾಂಶ ಕೊಟ್ಟೆವು.ಯಶಸ್ವಿಯಾದ ಪ್ರಯೋಗ.. ನಿರಂತರವಾಗಿ 55-60 ದಿನಗಳ ಕಾಲ ಈ ರೀತಿ ಮೆಂಟೇನ್ ಮಾಡಿದ ನಂತರ ಒಂದೊಂದೆ ಮರಿ ಮೊಟೆ ಒಡೆದು ಹೊರ ಬಂದವು.

ಅಂತಿಮವಾಗಿ ನಾಲ್ಕು ದಿನಗಳಲ್ಲಿ 12 ಮರಿಗಳನ್ನು ಹೊರಗೆ ತೆಗೆಯಲಾಗಿದ್ದು, ಇನ್ನುಳಿದವು ಸತ್ತು ಹೋದವು. ನಮ್ಮ ಪ್ರಯೋಗ ಯಶಸ್ವಿಯಾಗಿದ್ದನ್ನು ನೋಡಿ ಬಹಳಷ್ಟು ಸಂತಸವಾಯ್ತು ಎಂದು ಸಂತಸ ವ್ಯಕ್ತಪಡಿಸಿದರು. ಈ ಹಾವಿನ ಮರಿಗಳನ್ನು ಕಾಡಿಗೆ ಹೋಗಿ ಬಿಟ್ಟು ಬಂದಿದ್ದೇನೆ. ಯಾರಿಗಾದರೂ ಈ ರೀತಿ ಹಾವಿನ ಮೊಟ್ಟೆಗಳು ಸಿಕ್ಕರೆ ಯಾರೂ ಬಿಸಾಡಬೇಡಿ.

ಕ್ಯಾರಿಬ್ಯಾಗ್, ಬಾಕ್ಸ್ ಇಲ್ಲವೇ ಬಕೇಟ್​ನಲ್ಲಿ ಆ ಮೊಟ್ಟೆಗಳನ್ನು ಹಾಕಿ ಬಿಗಿಯಾಗಿ ಪ್ಯಾಕ್ ಮಾಡಬೇಕು. 30-40 ಡಿಗ್ರಿ ಉಷ್ಣಾಂಶವನ್ನು ನಿರಂತರವಾಗಿ 60 ದಿನ ಕೊಟ್ಟರೆ ಮೊಟ್ಟೆಯಿಂದ ಹಾವಿನ ಮರಿಗಳು ಹೊರಗೆ ಬರುತ್ತವೆ ಎಂದು‌ ರಾಮಾ ಪಾಟೀಲ ಮಾಹಿತಿ ನೀಡಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ