Breaking News

Yearly Archives: 2025

ದೆಹಲಿಗೆ ತೆರಳಿದ ವೇಳೆ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲಾ ಭೇಟಿ ವಿವಿಧ ವಿಚಾರಗಳ ಕುರಿತು ಚರ್ಚೆ

ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳಿದ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಸೌಹಾರ್ದಪೂರ್ಣವಾಗಿ ಭೇಟಿಯಾಗಿ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷರಾಗಿ ನೇಮಕಗೊಂಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಸುನೀಲ ಹನುಮಣ್ಣವರ ಅವರು ಶ್ರೀ ಸುರ್ಜೆವಾಲಾ ಅವರನ್ನು ಸನ್ಮಾನಿಸಿದರು.

Read More »

Vote Chori” ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಸಾರ್ವಜನಿಕ ಸಭೆ

ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ನಡೆಸುತ್ತಿರುವ “ಮತಗಳ್ಳತನ – Vote Chori” ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದೆ. ನಮ್ಮ ದೇಶದ ಲೋಕತಂತ್ರವನ್ನು ರಕ್ಷಿಸಿ, ನಿಜವಾದ ಮತದಾನದ ಹಕ್ಕು ಜನರ ಕೈಯಲ್ಲಿಯೇ ಉಳಿಯಬೇಕು. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ನ ನನ್ನ ಮಿತ್ರರು ಚುನಾವಣಾ ಆಯೋಗದ ಪ್ರತಿಯೊಂದು ಪ್ರಕ್ರಿಯೆಯ …

Read More »

ಹಚ್ಚೆಗಳು ಕೇವಲ ಶಾಯಿಯ ಪದಗಳಾಗಿರದೆ, ದುರಂತದ ಕ್ಷಣದಲ್ಲಿ ತಂದೆ ಮತ್ತು ಮಗನ ನಡುವಿನ ಅಂತಿಮ ಕೊಂಡಿಯಾಗಿ ಕಾರ್ಯನಿರ್ವಹಿಸಿದವು.

ದೆಹಲಿಯ ಕೆಂಪು ಕೋಟೆ ಬಳಿ ನಡೆದ ಮಾರಕ ಸ್ಫೋಟದ ನಂತರ, ಚಾಂದನಿಚೌಕ್‌ನ ೩೪ ವರ್ಷದ ಉದ್ಯಮಿ ಅಮರ್ ಕಟಾರಿಯಾ ಅವರ ಮೃತದೇಹವನ್ನು ಅವರ ತಂದೆ ಗುರುತಿಸಿದರು. ಅವರ ತೋಳುಗಳ ಮೇಲೆ ಅಮ್ಮ_ನನ್ನ_ಮೊದಲ_ಪ್ರೀತಿ” ಮತ್ತು ಅಪ್ಪ_ನನ್ನ_ಶಕ್ತಿ” ಎಂದು ಬರೆದ ವಿಶಿಷ್ಟ ಹಚ್ಚೆಗಳು ಮತ್ತು ಅವರ ಪತ್ನಿಯ ಹೆಸರು ಕೃತಿ” ಎಂದು ಬರೆದಿದ್ದಕ್ಕಾಗಿ ಗುರುತಿಸಲು ಸುಲಭವಾಯಿತು. ಅಮರ್ ಕಟಾರಿಯಾ ಔಷಧೀಯ ವ್ಯವಹಾರವನ್ನು ನಡೆಸುತ್ತಿದ್ದ ಮತ್ತು ಬೈಕಿಂಗ್ ಮತ್ತು ಪ್ರಯಾಣವನ್ನು ಇಷ್ಟಪಡುತ್ತಿದ್ದ. ದಾಳಿಯಲ್ಲಿ ಕೊಲ್ಲಲ್ಪಟ್ಟ …

Read More »

ಅತ್ಯಂತ ದುರ್ಬಲ ಗೃಹ ಸಚಿವರು ಇದ್ದರೆ ಅದು ಅಮಿತ್ ಶಾ, ಇದಕ್ಕೆ ಹೊಣೆ ಯಾರು?: ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ಅತ್ಯಂತ ದುರ್ಬಲ ಗೃಹ ಸಚಿವ ಇದ್ದರೆ ಅದು ಅಮಿತ್ ಶಾ. ಸ್ವತಂತ್ರ ಭಾರತದಲ್ಲೇ ದುರ್ಬಲ ಗೃಹ ಸಚಿವರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.‌ ಬೆಂಗಳೂರಲ್ಲಿ ಮಾತನಾಡಿದ ಅವರು, ಪುಲ್ವಾಮ ಆಯ್ತು, ಮಣಿಪುರ ಆಯ್ತು, ಈ ರೀತಿ ಸಾಕಷ್ಟು ಆಗಿದೆ. ಬಾಂಗ್ಲಾದವರು ಒಳಗೆ ಬರ್ತಾರೆ ಅಂತಾರೆ. ಹಾಗಾದ್ರೆ ಯಾರು ಆಡಳಿತ ಮಾಡ್ತಿರೋದು?. ಯಾರು ಇದಕ್ಕೆಲ್ಲ ಹೊಣೆಗಾರರು?. ಪ್ರಧಾನಿ‌ ಯಾಕೆ ಅಮಿತ್ ಶಾಗೆ ಹೆದರುತ್ತಿದ್ದಾರೆ?. ನಮ್ಮ ಗುಟ್ಟು ಹೊರಗೆ ಬರುತ್ತೆ ಅಂತಾನಾ?. …

Read More »

ಕ್ರಿಕೆಟ್ ಅಭ್ಯುದಯಕ್ಕೆ ಬಳಸದ ನೂರು ಕೋಟಿ ಸಂಸ್ಥೆಯ ಖಾತೆಯಲ್ಲಿದ್ದರೆ ಪ್ರಯೋಜನವಿಲ್ಲ; ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್

ಕ್ರಿಕೆಟ್ ಅಭ್ಯುದಯಕ್ಕೆ ಬಳಸದ ನೂರು ಕೋಟಿ ಸಂಸ್ಥೆಯ ಖಾತೆಯಲ್ಲಿದ್ದರೆ ಪ್ರಯೋಜನವಿಲ್ಲ; ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬೆಂಗಳೂರು: ಕ್ರೀಡೆ, ಆಟಗಾರರ ಅಭ್ಯುದಯಕ್ಕೆ ಬಳಸದೇ ನೂರು ಕೋಟಿ ರೂ ಹಣವನ್ನ ಕ್ರಿಕೆಟ್ ಸಂಸ್ಥೆಯ ಖಾತೆಯಲ್ಲಿರಿಸಿಕೊಂಡರೆ ಪ್ರಯೋಜನವೇನು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪ್ರಶ್ನಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಆಡಳಿತ ಮಂಡಳಿ ಆಯ್ಕೆ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅವರು ತಮ್ಮ ‘ಟೀಂ ಗೇಮ್ ಚೇಂಜರ್ಸ್’ ಬಣದಲ್ಲಿರುವ …

Read More »

ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ: ಆನ್‍ಲೈನ್‍ನಲ್ಲಿ ಸ್ವಯಂ ಘೋಷಣೆ ಸಲ್ಲಿಸಲು ಅವಧಿ ವಿಸ್ತರಣೆ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಆನ್‍ಲೈನ್‍ ಮೂಲಕ ಸ್ವಯಂ ಘೋಷಣೆ ಸಲ್ಲಿಸುವ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಿದೆ. ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಜನರ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದು, ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ ಆನ್​​ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಅವಧಿಯನ್ನು …

Read More »

ಮುಂದುವರೆದ ಹುಲಿ ದಾಳಿ: ಎರಡು ಹಸುಗಳು ಬಲಿ

ಚಾಮರಾಜನಗರ: ಹಾಡಹಗಲೇ ಹುಲಿ ದಾಳಿ ನಡೆಸಿ ಎರಡು ಹಸುಗಳನ್ನು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಂಚಹಳ್ಳಿ ಗ್ರಾಮದಲ್ಲಿ ದೀಪಕ್ ಎಂಬುವವರಿಗೆ ಸೇರಿದ ಹಸುಗಳು ಇದಾಗಿದ್ದು, ಕೆರೆ ಪಕ್ಕದ ಜಮೀನಿನಲ್ಲಿ ಮೇವು ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಹುಲಿ ಎರಡು ಹಸುಗಳನ್ನು ಕೊಂದು ರಕ್ತ ಹೀರಿದೆ. ಸುತ್ತಮುತ್ತಲ ರೈತರೆಲ್ಲಾ ಕೂಗಿಕೊಂಡ ಹಿನ್ನೆಲೆ ಹುಲಿ ಪರಾರಿಯಾಗಿದೆ. ಅರಣ್ಯ ಇಲಾಖೆಗೆ …

Read More »

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ: ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಸಿ ನೃತ್ಯ ಮಾಡಿದ ಆರೋಪದಡಿ ನಾಲ್ಕು ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಮಾನತುಗೊಂಡ ಬೆಂಗಳೂರು ಕೇಂದ್ರ ಕಾರಾಗೃಹ ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ ನೀಡಿದ ದೂರು ಆಧರಿಸಿ ಕಾರ್ತಿಕ್, ಧನಂಜಯ, ಮಂಜುನಾಥ್ ಹಾಗೂ ಚರಣ್ ರಾವ್ ಎಂಬುವರ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ. ಪರಪ್ಪನ ಕಾರಾಗೃಹದಲ್ಲಿ ಉಗ್ರ ಜುಹಾಬ್ ಶಕೀಲ್ …

Read More »

ಬೆಳಗಾವಿಯಲ್ಲಿ 10 ಜೂಜುಕೋರರು; ಇಬ್ಬರು ಮಟ್ಕಾ ಆಡುವವರ ಬಂಧನ

ಬೆಳಗಾವಿಯಲ್ಲಿ 10 ಜೂಜುಕೋರರು; ಇಬ್ಬರು ಮಟ್ಕಾ ಆಡುವವರ ಬಂಧನ ಬೆನಕನಹಳ್ಳಿಯಲ್ಲಿ ಜೂಜಾಟ ಆಡುತ್ತಿದ್ದ 10 ಜನರ ಬಂಧನ ಮಾರ್ಕೆಟ್ ಪೊಲೀಸರಿಂದ ಮಟ್ಕಾ ಆಡುತ್ತಿದ್ದ ಇಬ್ಬರ ಬಂಧನ ಬೆಳಗಾವಿ ಗ್ರಾಮೀಣ ಮತ್ತು ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ₹56,840 ನಗದು ಮತ್ತು ಇತರೆ ವಸ್ತು ವಶ ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜೂಜಾಟದ ವಿರುದ್ಧ ನಡೆದ ಎರಡು ವಿಶೇಷ ಕಾರ್ಯಾಚರಣೆಗಳಲ್ಲಿ ಪೊಲೀಸರು ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದಾರೆ. ಈ …

Read More »

ಜಗತ್ತಿನಲ್ಲೇ ಪುರಾತಣವಾದ ನಮ್ಮ ದೇಶದ ಸಂಸ್ಕೃತಿ ಇತಿಹಾಸವನ್ನು ಉಳಿಸುವ ಕಾರ್ಯಗಳಾಬೇಕು; ಶಾಸಕ ಆಸೀಫ್ ಸೇಠ್

ಜಗತ್ತಿನಲ್ಲೇ ಪುರಾತಣವಾದ ನಮ್ಮ ದೇಶದ ಸಂಸ್ಕೃತಿ ಇತಿಹಾಸವನ್ನು ಉಳಿಸುವ ಕಾರ್ಯಗಳಾಬೇಕು; ಶಾಸಕ ಆಸೀಫ್ ಸೇಠ್ ಸ್ಫೂರ್ತಿ ಅಸೋಸಿಯೇಷನ್’ನಿಂದ ಭಾವಗೀತ ಗಾಯನ; ಕಾರ್ತಿಕೋತ್ಸವ ಭಾವಗೀತ ಗಾಯನ; ಕಾರ್ತಿಕೋತ್ಸವ ಸ್ಫೂರ್ತಿ ಅಸೋಸಿಯೇಷನ್’ನಿಂದ ಆಯೋಜನೆ ನಮ್ಮ ದೇಶದ ಸಂಸ್ಕೃತಿ ಇತಿಹಾಸವನ್ನು ಉಳಿಸುವ ಕಾರ್ಯಗಳಾಬೇಕು ಶಾಸಕ ಆಸೀಫ್ ಸೇಠ್ ಅಭಿಪ್ರಾಯ ಬೆಳಗಾವಿಯ ಸ್ಫೂರ್ತಿ ಸೋಷಿಯಲ್ ವೆಲ್’ಫೇರ್ ಅಸೋಸಿಯೇಷನ್’ನ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಭಾವಗೀತೆ ಗಾಯನ ಸ್ಪರ್ಧೆ ಮತ್ತು ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಮಂಗಳವಾರ …

Read More »