ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಮಂಗಳವಾರ ತಡರಾತ್ರಿಯ ಭೇಟಿ ರಾಜ್ಯ ಪವರ್ ಫೈಟ್ಗೆ ಮತ್ತಷ್ಟು ತಿರುವು ನೀಡಿದೆ. ಖಾಸಗಿ ಹೊಟೇಲ್ನಲ್ಲಿ ಸತೀಶ್ ಜಾರಕಿಹೊಳಿ, ಡಿಕೆಶಿ ನಡುವೆ ಮಾತುಕತೆ ನಡೆದಿದೆ. ಸತೀಶ್ ಜಾರಕಿಹೊಳಿ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಸುದೀರ್ಘ ಚರ್ಚೆ ನಡೆಸಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಸಿಎಂ ಅವರ ಮನವೊಲಿಸುವ ಜೊತೆಗೆ ತಮ್ಮ ಸಹಕಾರ ಬೇಕೆಂದು ಮನವಿ …
Read More »Yearly Archives: 2025
ಮೊದಲ ಪೋಕ್ಸೋ ಕೇಸ್ನಲ್ಲಿ ಮುರುಘಾ ಶ್ರೀ ನಿರ್ದೋಷಿ ಎಂದು ಕೋರ್ಟ್ ತೀರ್ಪು: ಕೇಸ್ನಿಂದ ಮೂವರು ಖುಲಾಸೆ
ಚಿತ್ರದುರ್ಗ: ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಮೊದಲ ಪೋಕ್ಸೋ(POCSO) ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಸ್ವಾಮೀಜಿ ಸೇರಿದಂತೆ ಮೂವರನ್ನು ಕೇಸ್ನಿಂದ ಮುಕ್ತಗೊಳಿಸಿದೆ. ನ್ಯಾಯಾಧೀಶರಾದ ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಅವರು ತೀರ್ಪು ಪ್ರಕಟಿಸಿದರು. ತೀರ್ಪಿನ ನಂತರ ನ್ಯಾಯಾಲಯದಿಂದ ಹೊರಬಂದ ಶಿವಮೂರ್ತಿ ಮುರುಘಾ ಶರಣರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಕೋರ್ಟ್ ಆವರಣದಲ್ಲಿ ಶ್ರೀಗಳನ್ನು ಭೇಟಿಯಾಗಲು …
Read More »ಬಳ್ಳಾರಿ ನಗರದ ಬುಡಾ ಕಾಂಪ್ಲೆಕ್ಸ್ ಬಳಿ ನ.18 ರಂದು ನಡೆದಿದ್ದ ಕೊಲೆ ಭೇದಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಬಳ್ಳಾರಿ: ನಗರದ ಬುಡಾ ಕಾಂಪ್ಲೆಕ್ಸ್ ಬಳಿ ನ.18 ರಂದು ನಡೆದಿದ್ದ ಕೊಲೆ ಕೇಸ್ ಭೇದಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿ ರಾಂಪುರದ ಸತೀಶ್ (20) ಎಂಬಾತನನ್ನು ಬಂಧಿಸಲಾಗಿದೆ. ಬಳ್ಳಾರಿಯ ಅಂದ್ರಾಳು ನಿವಾಸಿಯಾಗಿದ್ದ ಶಿವು (21) ಕೊಲೆಯಾದ ಯುವಕ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಶಿವು ಹಾಗೂ ಸತೀಶ್ ಚಿಂದಿ ಆಯುವ ಕೆಲಸ ಮಾಡ್ತಿದ್ದು, ಕೊಲೆಯಾದ ದಿನದಂದು ಇಬ್ಬರು ಸೇರಿ 2 ಸಾವಿರ ಹಣ …
Read More »ಶಿಕ್ಷಣ ಪಡೆದರೆ ಮಾತ್ರ ಉತ್ತಮ ವೃತ್ತಿ, ಸ್ಥಾನಮಾನ ದೊರೆಯಲು ಸಾಧ್ಯ: ಸಚಿವ ಸತೀಶ್ ಜಾರಕಿಹೊಳಿ
ಶಿಕ್ಷಣ ಪಡೆದರೆ ಮಾತ್ರ ಉತ್ತಮ ವೃತ್ತಿ, ಸ್ಥಾನಮಾನ ದೊರೆಯಲು ಸಾಧ್ಯ: ಸಚಿವ ಸತೀಶ್ ಜಾರಕಿಹೊಳಿ ಭೂತರಾಮನಹಟ್ಟಿ ಗ್ರಾಮದಲ್ಲಿ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆ ಕಾರ್ಯಕ್ರಮ ಬೆಳಗಾವಿ: ಗುಣಮಟ್ಟದ ಶಿಕ್ಷಣ ಪಡೆದರೆ ಮಾತ್ರ ಉತ್ತಮ ವೃತ್ತಿ, ಉತ್ತಮ ಸ್ಥಾನಮಾನ ದೊರೆಯಲು ಸಾಧ್ಯವಿದೆ. ಆದಕಾರಣ ಕ್ಷೇತ್ರದಲ್ಲಿ ಸುಮಾರು 200 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ …
Read More »ಮಹಾಂತೇಶ ಬೀಳಗಿ ಪ್ರಾರ್ಥಿವ ಶರೀರ ಬುಧವಾರ ರಾಮದುರ್ಗ ಪಟ್ಟಣದ ನವಿಪೇಟೆಗೆ
ರಾಮದುರ್ಗ :ಕಲಬುರಗಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಪ್ರಾರ್ಥಿವ ಶರೀರ ಬುಧವಾರ ರಾಮದುರ್ಗ ಪಟ್ಟಣದ ನವಿಪೇಟೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದ ಮಹಾಂತೇಶ ಬೀಳಗಿ ಪ್ರಯಾಣಿಸುತ್ತಿದ್ದ ಕಾರ್ ಮರಕ್ಕೆ ಡಿಕ್ಕಿ ಹೊಡೆದು ಕಾರ್ ನಲ್ಲಿದ್ದ ಮೂವರು ಮೃತಪಟ್ಟಿದ್ದರು. ಕಲ್ಬುರ್ಗಿಯಿಂದ ರಾಮದುರ್ಗ ತಲುಪಿದ ಮೃತ ಮಹಾಂತೇಶ ಮೃತದೇಹ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾರ್ವಜನಿಕ ದರ್ಶನದ ಬಳಿಕ …
Read More »ಧಾರವಾಡದಲ್ಲಿ ಮೊದಲ ಬಾರಿಗೆ ದಂಡದಲ್ಲಿ ರಿಯಾಯ್ತಿ ನೀಡಿದ ಸಾರಿಗೆ ಇಲಾಖೆ….1991 ರಿಂದ 2020 ಮಾರ್ಚ್ 31 ರವರೆಗಿನ ಕೇಸ್ಗಳಿಗೆ ಅವಕಾಶ.
ಧಾರವಾಡದಲ್ಲಿ ಮೊದಲ ಬಾರಿಗೆ ದಂಡದಲ್ಲಿ ರಿಯಾಯ್ತಿ ನೀಡಿದ ಸಾರಿಗೆ ಇಲಾಖೆ….1991 ರಿಂದ 2020 ಮಾರ್ಚ್ 31 ರವರೆಗಿನ ಕೇಸ್ಗಳಿಗೆ ಅವಕಾಶ. ಇಷ್ಟು ದಿನ ರಾಜ್ಯದ ಸಂಚಾರಿ ಠಾಣೆಯಲ್ಲಿ ನೀಡಲಾಗುತ್ತಿದ್ದ ದಂಡಾಸ್ತ್ರದಲ್ಲಿನ 50% ಫೈನ್ ಡಿಸ್ಕೌಂಟ್ ಈಗ ಸಾರಿಗೆ ಇಲಾಖೆಯಲ್ಲೂ ನೀಡಲಾಗುತ್ತಿದೆ. ಮೊದಲ ಬಾರಿಗೆ ಧಾರವಾಡ ಸಾರಿಗೆ ಇಲಾಖೆಯಿಂದ ವಿವಿಧ ಪ್ರಕರಣಗಳಡಿ ದೂರು ದಾಖಲಾಗಿ ದಂಡ ಪಾವತಿ ಮಾಡದೇ ಇರುವ ವಾಹನ ಸವಾರರಿಗೆ ಸಾರಿಗೆ ಇಲಾಖೆ ರಿಯಾಯ್ತಿ ನೀಡಿ ದಂಡ ಪಾವತಿಸಲು …
Read More »ಗ್ರೀನ್ ಸೇವಿಯರ್ಸ್’ ಮತ್ತು ಹಿಂಡಾಲ್ಕೊ ಸಹಯೋಗ: ರಾಸಾಯನಿಕ ಮುಕ್ತ ಕೃಷಿ ಅರಣ್ಯಕ್ಕೆ ಚಾಲನೆ!
ಗ್ರೀನ್ ಸೇವಿಯರ್ಸ್’ ಮತ್ತು ಹಿಂಡಾಲ್ಕೊ ಸಹಯೋಗ: ರಾಸಾಯನಿಕ ಮುಕ್ತ ಕೃಷಿ ಅರಣ್ಯಕ್ಕೆ ಚಾಲನೆ! ಬೆಳಗಾವಿ ಸುತ್ತ ಮರ ನೆಡುವ ಮಹತ್ವದ ಯೋಜನೆ. ಹಿಂಡಾಲ್ಕೊ ಪ್ರಾಯೋಜಕತ್ವದಲ್ಲಿ ಮಹಾಲೆನಹಟ್ಟಿಯಲ್ಲಿ ಸ್ಥಾಪನೆ. ಹಣ್ಣು, ತರಕಾರಿ, ಹೂವು ಬೆಳೆಯುವ ರೈತರಿಗೆ ಪ್ರೋತ್ಸಾಹ. ನಗರವಾಸಿಗಳಿಗೆ ಕಡಿಮೆ ಬೆಲೆಯಲ್ಲಿ ರಾಸಾಯನಿಕ ಮುಕ್ತ ಉತ್ಪನ್ನ. ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 500ಕ್ಕೂ ಹೆಚ್ಚು ಭಾನುವಾರಗಳಿಂದ ಸತತವಾಗಿ ಮರ ನೆಡುವ ಕಾರ್ಯದಲ್ಲಿ ತೊಡಗಿರುವ ‘ಗ್ರೀನ್ ಸೇವಿಯರ್ಸ್’ ತಂಡವು, ಇದೀಗ ಗ್ರಾಮೀಣ …
Read More »ಅಮೀನಗಢದಲ್ಲಿ ‘ಲುಂಗಿ ಗ್ಯಾಂಗ್’ ಕರಾಮತ್ತು: ಸಿಸಿಟಿವಿಯಲ್ಲಿ ಸೆರೆ, ಕಳ್ಳತನ ಯತ್ನ ವಿಫಲ!
ಅಮೀನಗಢದಲ್ಲಿ ‘ಲುಂಗಿ ಗ್ಯಾಂಗ್’ ಕರಾಮತ್ತು: ಸಿಸಿಟಿವಿಯಲ್ಲಿ ಸೆರೆ, ಕಳ್ಳತನ ಯತ್ನ ವಿಫಲ! ಬಾಗಲಕೋಟೆ ಜಿಲ್ಲೆಯ ಅಮೀನಗಢ ಪಟ್ಟಣದಲ್ಲಿ ಕಳ್ಳರ ಉಪಟಳ. ಮುಖಕ್ಕೆ ಮಾಸ್ಕ್, ಕೈಲಿ ರಾಡ್: ಸಿಸಿಟಿವಿಯಲ್ಲಿ ಕಳ್ಳರ ಪ್ರಯತ್ನ ದೃಶ್ಯ. ದಡ್ಡೆನವರ ಮನೆ, ಟೈಲ್ಸ್ ಅಂಗಡಿಯಲ್ಲಿ ಕಳ್ಳತನ ಯತ್ನ. ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಬಾಗಲಕೋಟೆ ಜಿಲ್ಲೆಯ ಅಮೀನಗಢ ಪಟ್ಟಣದಲ್ಲಿ ‘ಲುಂಗಿ ಗ್ಯಾಂಗ್’ ಎಂದು ಕರೆಯಲ್ಪಡುವ ಮೂವರು ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದು, ಇವರ ಸಂಪೂರ್ಣ ಕರಾಮತ್ತು ಮನೆಯಲ್ಲಿ …
Read More »ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ!
ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ! ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರಿಂದ ಪ್ರದಾನ. ನವೆಂಬರ್ 21ರಂದು ಕಲಬುರಗಿಯ ಜಿಐಎಂಎಸ್’ನಲ್ಲಿ ಪ್ರಶಸ್ತಿ. ಬೆಳಗಾವಿಯ ಕೆಎಹೆಚ್ಇಆರ್ ಡೀಮ್ಡ್ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಜೆ.ಎನ್. ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಶಿವಸ್ವಾಮಿ ಎಸ್. ಮುಡಿಗುಂಡ ಅವರಿಗೆ ಪ್ರತಿಷ್ಠಿತ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಕಲಬುರಗಿಯ ಜಿಐಎಂಎಸ್ನಲ್ಲಿ ನವೆಂಬರ್ 21, 2025 ರಂದು ನಡೆದ ‘ಕರ್ನಾಟಕ ಸಮುದಾಯ …
Read More »ಮನೆ ಕೆಲಸದ ಮಹಿಳೆಯ ಮೇಲೆ ಪದೇ ಪದೆ ಅತ್ಯಾಚಾರ ಜ್ವಲ್ ರೇವಣ್ಣಗೆ ಜಾಮೀನು ನೀಡದಂತೆ ಹೈಕೋರ್ಟ್ನಲ್ಲಿ ಸರ್ಕಾರದ ವಾದ
ಬೆಂಗಳೂರು : ಮನೆ ಕೆಲಸದ ಮಹಿಳೆಯ ಮೇಲೆ ಪದೇ ಪದೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತನ್ನ ವಿರುದ್ಧದ ಆರೋಪದ ಸಂಬಂಧ ತನಿಖೆಗೆ ಅಸಹಕಾರ ತೋರಿದ್ದಲ್ಲದೆ, ವಿದೇಶಕ್ಕೆ ಪರಾರಿಯಾಗಿದ್ದೂ ಅಲ್ಲದೇ, ಸುಮಾರು 10-12 ಬಾರಿ ವಿಚಾರಣೆ ತಡೆಯಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಜಾಮೀನಿಗೆ ಅನರ್ಹರು ಎಂದು ವಿಶೇಷ ತನಿಖಾ ದಳ(ಎಸ್ಐಟಿ) ಹೈಕೋರ್ಟ್ಗೆ ತಿಳಿಸಿದೆ. ಜೀವನ ಪರ್ಯಾಂತ ಸೆರೆವಾಸ ಶಿಕ್ಷೆ ರದ್ದು ಹಾಗೂ ಜಾಮೀನು ನೀಡಬೇಕೆಂದು …
Read More »
Laxmi News 24×7