Breaking News

Daily Archives: ಮೇ 2, 2025

ಕಾಂಗ್ರೆಸ್‍ನವರು ಪಾಕಿಸ್ತಾನದಲ್ಲಿ ಹೀರೋಗಳಾಗಿದ್ದಾರೆ:ಜೋಶಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ಪಾಕಿಸ್ತಾನದಲ್ಲಿ ಸಂಭ್ರಮಿಸಿದ್ದಾರೆ. ದೇಶದ ಭದ್ರತೆಯ ವಿಚಾರದಲ್ಲಿ ಹೇಳಿಕೆ ನೀಡಿದ ಕಾಂಗ್ರೆಸ್‍ನವರೆಲ್ಲ ಪಾಕಿಸ್ತಾನದಲ್ಲಿ ಹೀರೋ ಆಗಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸ್ವಲ್ಪವಾದರೂ ಮರ್ಯಾದೆ ಬೇಡವೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ‌ಜೋಶಿ ಟೀಕಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ್ ಜಿಂದಾಬಾದ್ ಎನ್ನಲು ನೂರಾರು ಕಾರಣ ಎಂದು ರಾಜ್ಯದ ಸಚಿವರು ಹೇಳುತ್ತಾರೆ. ಇದು ದೇಶದ್ರೋಹ ಅಲ್ಲವೇ? ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ? ಎಂದು ಅವರು ಪ್ರಶ್ನಿಸಿದರು. ಕರ್ನಾಟಕದಲ್ಲಿ ಹಾಲಿನಿಂದ ಆಲ್ಕೋಹಾಲ್​ವರೆಗೆ …

Read More »

SSLC: ಆರ್ ಟಿಇಯಡಿ ಸೀಟು ಪಡೆದ ಶೇ 75ರಷ್ಟು ವಿದ್ಯಾರ್ಥಿಗಳು ಪಾಸ್; 50 ವಿದ್ಯಾರ್ಥಿಗಳಿಗೆ 620ಕ್ಕಿಂತ ಹೆಚ್ಚು ಮಾರ್ಕ್ಸ್ – SSLC RESULT 2025

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರಡಿ (ಆರ್​ಟಿಇ) ಮೊದಲ ಬಾರಿಗೆ ಎಸ್​ಎಸ್​ಎಲ್​ಸಿಯಲ್ಲಿ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳ ಪೈಕಿ ಶೇ.75ರಷ್ಟು ಮಂದಿ ಉತ್ತೀರ್ಣರಾಗಿದ್ಧಾರೆ. 25,453 ವಿದ್ಯಾರ್ಥಿಗಳ ಪೈಕಿ 19,235 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2009ರಲ್ಲಿ ಆರ್​ಟಿಇ ಕಾಯ್ದೆ ಬಂದಿತ್ತು. 2013-14ನೇ ಶೈಕ್ಷಣಿಕ ಸಾಲಿನಲ್ಲಿ ಎಲ್​ಕೆಜಿ ಅಥವಾ 1ನೇ ತರಗತಿಗೆ ಕಾಯ್ದೆಯಡಿ ಖಾಸಗಿ ಅನುದಾನಿತ ಶಾಲೆಗಳಲ್ಲಿ ಶೇ.25ರಷ್ಟು ದಾಖಲಾತಿ ಪಡೆದಿದ್ದ ವಿದ್ಯಾರ್ಥಿಗಳು ಮೊದಲ ಬಾರಿ ಈ ಬಾರಿ ಪರೀಕ್ಷೆ ಎದುರಿಸಿದ್ದರು. ಉತ್ತೀರ್ಣರಾದ 19,235 ವಿದ್ಯಾರ್ಥಿಗಳ ಪೈಕಿ …

Read More »

ಹಣಕಾಸು ವಿಚಾರಕ್ಕಾಗಿ ವೈಷಮ್ಯ: ನೈಜೀರಿಯಾ ಯುವತಿ ಹತ್ಯೆಗೈದ ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಹಣಕಾಸಿನ ವಿಚಾರಕ್ಕಾಗಿ ವಿದೇಶಿ ಯುವತಿಯನ್ನು ಕೊಲೆಗೈದ ಆರೋಪದಡಿ ಘಾನಾ ದೇಶದ ಪ್ರಜೆಯನ್ನ ಚಿಕ್ಕಜಾಲ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ. ನೈಜೀರಿಯಾ ಮೂಲದ ಲೋವಿತ್ (28) ಎಂಬ ಯುವತಿಯನ್ನು ಹತ್ಯೆಗೈದ ಆರೋಪದಡಿ ಸ್ಯಾಮನ್ಸ್ ಬಪುಂಗಾ ಎಂಬಾತನನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಏ.30ರಂದು ಬೆಟ್ಟಹಲಸೂರು ಮುಖ್ಯರಸ್ತೆಯ ತರಹುಣಸೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಯುವತಿ ಶವ ಪತ್ತೆಯಾಗಿತ್ತು. ಹತ್ಯೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು, ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಗರದ …

Read More »

ದಶಕಗಳ ಬಳಿಕ ಗೋಲಿಸೋಡಕ್ಕೆ ಮತ್ತೆ ಡಿಮ್ಯಾಂಡ್

ಮಂಗಳೂರು: ಮೂರು ದಶಕಗಳ ಹಿಂದೆ ತಂಪು ಪಾನೀಯ ಎಂದರೆ ಅದು ಗೋಲಿಸೋಡ. ಸ್ಥಳೀಯವಾಗಿ ತಯಾರಾಗುತ್ತಿದ್ದ ಗೋಲಿಸೋಡಕ್ಕೆ ವಿಪರೀತ ಡಿಮ್ಯಾಂಡ್ ಇತ್ತು. ಆಗಿನ ಕಾಲದ ಗೋಲಿಸೋಡ ಕ್ರಮೇಣ ನೇಪಥ್ಯಕ್ಕೆ ಸರಿದಿತ್ತು. ಆದರೆ ಮೂರು ದಶಕಗಳ ಬಳಿಕ ಮತ್ತೆ ಈ ಗೋಲಿಸೋಡಕ್ಕೆ ಡಿಮ್ಯಾಂಡ್ ಬಂದಿದೆ. ಮೂರು ಫ್ಲೇವರ್​ಗಳಾದ ಆರೆಂಜ್, ಜಿಂಜರ್ ಮತ್ತು ಸಪ್ಪೆಯಲ್ಲಿ ಇರುತ್ತಿದ್ದ ಗೋಲಿಸೋಡಕ್ಕೆ ಕ್ರಮೇಣ ಬೇಡಿಕೆ ಕಡಿಮೆಯಾಗುತ್ತಾ ಬಂತು. ವಿವಿಧ ಕಂಪೆನಿಗಳ ತಂಪು ಪಾನೀಯಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಗೋಲಿಸೋಡಕ್ಕೆ ಬೇಡಿಕೆ ಕಡಿಮೆಯಾಯಿತು. …

Read More »

ಶಿರಸಿಯ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿನಿಗೆ SSLC ಪರೀಕ್ಷೆಯಲ್ಲಿ 625 ಅಂಕ

ಶಿರಸಿ(ಉತ್ತರ ಕನ್ನಡ): ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶಿರಸಿಯ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ಪೂರ್ಣಾಂಕ (625) ಪಡೆದು ವಿಶೇಷ ಸಾಧನೆ ತೋರಿದ್ದಾರೆ. ಒಟ್ಟು ಫಲಿತಾಂಶದಲ್ಲಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ. ಬಿಹಾರ ಮೂಲದ ಶಗುಫ್ತಾ ಐದು ವರ್ಷಗಳಿಂದ ಶಿರಸಿಯ ಸರ್ಕಾರಿ ಉರ್ದು ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈಕೆ ಬಿಹಾರದಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಹಿಸಿದ್ದ ಮೌಲಾನಾ ಅವರ …

Read More »

ಸುಹಾಸ್ ಶೆಟ್ಟಿ ಅಂತ್ಯಕ್ರಿಯೆಯಲ್ಲಿ ವಿಜಯೇಂದ್ರ, ಆರ್ ಅಶೋಕ್ ಭಾಗಿ; ಬಿಜೆಪಿಯಿಂದ 25 ಲಕ್ಷ ರೂ ಪರಿಹಾರ ಘೋಷಣೆ

ಬಂಟ್ವಾಳ (ದ.ಕ): ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಅಂತ್ಯಕ್ರಿಯೆ ಕಾರಿಂಜದಲ್ಲಿ ಶುಕ್ರವಾರ ಸಂಜೆ ನಡೆಯಿತು. ಅದಕ್ಕೂ ಮುನ್ನ ಅವರ ಅಂತಿಮ ಯಾತ್ರೆಯನ್ನು ನಡೆಸಲಾಯಿತು. ಮಂಗಳೂರಿನ ಆಸ್ಪತ್ರೆಯಿಂದ ಕಾರಿಂಜದವರೆಗೆ ನಡೆದ ಅಂತಿಮ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಬಜರಂಗದಳದ ಆಂಬ್ಯುಲೆನ್ಸ್​ನಲ್ಲಿ ಅವರ ಶವವನ್ನು ಕರೆತಂದ ಸಂದರ್ಭ ದಾರಿಯುದ್ದಕ್ಕೂ ಹಿಂದೂ ಸಂಘಟನೆ ಕಾರ್ಯಕರ್ತರು ಪುಷ್ಪನಮನ ಸಲ್ಲಿಸಿದರು. ಫರಂಗಿಪೇಟೆ, ತುಂಬೆ ಕಡೆಗೋಳಿ, ಬಿ.ಸಿ.ರೋಡ್, ಬಂಟ್ವಾಳ, ವಗ್ಗ ಮೂಲಕ ಕಾರಿಂಜದ ಅವರ …

Read More »

ಬೆಳಗಾವಿ ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಫಲಕ… ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಜಾಗೃತಿ…

ಬೆಳಗಾವಿ ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಫಲಕ… ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಜಾಗೃತಿ… ಬೆಳಗಾವಿ ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ಫಲಕವನ್ನು ಅಳವಡಿಸಲಾಯಿತು. ಮರಣೋತ್ತರ ಅಂಗಾಂಗ ದಾನವು ಮಹತ್ವದ ಕಾರ್ಯವಾಗಿದೆ. ಈ ಹಿನ್ನೆಲೆ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಬೆಳಗಾವಿ ಸ್ವರೂಪ …

Read More »

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ.

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಪ್ರತಿಭಟನೆ. ಮಜೀದ್ ಎ ಉಮರ್ ದಿಂದ ಬಸವೇಶ್ವರ ಸರ್ಕಲ್ ವರೆಗೆ ಬೃಹತ್ ಪ್ರತಿಭಟನೆ ರ್ಯಾಲಿ. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ. ರ್ಯಾಲಿಯಲ್ಲಿ ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು ಭಾಗಿ. ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ. ವಕ್ಫ್ ತಿದ್ದುಪಡಿ ಕಾನೂನು ವಾಪಸ್ ಪಡೆಯುವಂತೆ ಆಗ್ರಹ. …

Read More »

ನಾನೆಂದೂ ಜಾತಿ ರಾಜಕಾರಣ ಮಾಡಿಲ್ಲ, ಧರ್ಮದಿಂದ ರಾಜಕಾರಣ ಮಾಡುತ್ತಿರುವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ನಾನೆಂದೂ ಜಾತಿ ರಾಜಕಾರಣ ಮಾಡಿಲ್ಲ, ಧರ್ಮದಿಂದ ರಾಜಕಾರಣ ಮಾಡುತ್ತಿರುವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೊನ್ನಿಹಾಳ ಗ್ರಾಮದಲ್ಲಿ ನೂತನ ವಿಠ್ಠಲ ಬೀರದೇವ ಮಂದಿರ ಉದ್ಘಾಟನೆ ದೇವಸ್ಥಾನದ ಕಮಿಟಿಗೆ 12 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಸಚಿವರು ಬೆಳಗಾವಿ: ಭಾರತದಲ್ಲಿ ದೇವರೆಂದರೆ ಭಯ ಭಕ್ತಿ ಜಾಸ್ತಿ. ಈ ಕಾರಣದಿಂದಲೇ ನಮ್ಮ ದೇಶ ಸುಭದ್ರವಾಗಿದೆ. ನನಗೂ ಕೂಡ ದೇವರೆಂದರೆ ಅಪಾರ ಭಕ್ತಿ. ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ನೋಡುತ್ತಾ …

Read More »

ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ; ಎಫ್ಐಆರ್ ದಾಖಲು

ಬೆಂಗಳೂರು: ಸದ್ದುಗುಂಟೆಪಾಳ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅಂತಹದೆ ಮತ್ತೊಂದು ಪ್ರಕರಣ ವರದಿಯಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಾಗುತ್ತಿದ್ದ ಯುವತಿಯನ್ನು ಹಿಂದಿನಿಂದ ಸ್ಪರ್ಶಿಸಿ ಪರಾರಿಯಾಗಿರುವ ಘಟನೆ ಮಾರತ್ ಹಳ್ಳಿ ಠಾಣೆ ವ್ಯಾಪ್ತಿಯ ಇಕೋ ವರ್ಲ್ಡ್ ಬಳಿ ನಡೆದಿದೆ. 23 ವರ್ಷದ ಯುವತಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮಾರತ್ ಹಳ್ಳಿ ಠಾಣೆ ಪೊಲೀಸರು, ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಏಪ್ರಿಲ್ 30ರಂದು ರಾತ್ರಿ …

Read More »