Breaking News

Monthly Archives: ಸೆಪ್ಟೆಂಬರ್ 2024

ಪರಿಶಿಷ್ಟರ ಮೇಲೆ ದೌರ್ಜನ್ಯ: ತ್ವರಿತ ಕ್ರಮವಾಗಲಿ

ಬೆಳಗಾವಿ: ‘ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆದ ಕುರಿತು ದೂರು ದಾಖಲಾದರೆ, ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಎಚ್ಚರಿಕೆ ಕೊಟ್ಟರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   ‘ಈ ಸಭೆಗೆ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಸಭೆಗೆ ಹಾಜರಾದವರು ಅನುಪಾಲನಾ …

Read More »

ವಿಪತ್ತು ಬಂದಾಗ ಸೇವೆ ಮಾಡಿ’

ಹುಕ್ಕೇರಿ: ಹುಕ್ಕೇರಿ ಮತ್ತು ಸಂಕೇಶ್ವರ ವಲಯಗಳ ವಿಪತ್ತು ನಿರ್ವಹಣೆ ಘಟಕದ ಸ್ವಯಂ ಸೇವಕರಿಗೆ ತಾಲ್ಲೂಕಿನ ನಿಡಸೋಶಿಯ ದುರದುಂಡೇಶ್ವರ ಮಠದಲ್ಲಿ ಗುರುವಾರ ನಡೆದ ‘ಶೌರ್ಯ ವಿಪತ್ತು ಸ್ವಯಂ ಸೇವಕರ ತರಬೇತಿ’ ಕಾರ್ಯಕ್ರಮವನ್ನು ಸುಬೇದಾರ್ ಎಸ್.ಕೆ.ದೇಸಾಯಿ ಹಾಗೂ ನಿಡಸೋಸಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮದೀನಾ ಶಾನೂರ್ ಮಕಾಂದಾರ್ ಉದ್ಘಾಟಿಸಿದರು.   ನಂತರ ಮಾತನಾಡಿದ ಸುಬೇದಾರ್ ಎಸ್.ಕೆ.ದೇಸಾಯಿ, ‘ಯುವಕರು ಸೈನ್ಯದಲ್ಲಿ ಸೇರಿ ದೇಶ ಮಾಡಬೇಕಂತಿಲ್ಲ. ದೇಶದ ಒಳಗೆ ಜನರಿಗೆ ವಿಪತ್ತು ಬಂದಾಗ ಸೇವೆ ಸಲ್ಲಿಸಿದರೆ, …

Read More »

ಬಾವಿಗೆ ಬಿದ್ದು ಶಿಂಧೊಳ್ಳಿ ಗ್ರಾಮದ ಮಹಿಳೆ ಸಾವು

ಬೆಳಗಾವಿ: ತಾಲ್ಲೂಕಿನ ಶಿಂಧೊಳ್ಳಿ ಗ್ರಾಮದ ತೆರೆದ ಬಾವಿಯಲ್ಲಿ ಗುರುವಾರ ಬೆಳಿಗ್ಗೆ ಮಹಿಳೆಯೊಬ್ಬರು ಬಿದ್ದು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಭಾರತಿ ಪೂಜಾರಿ(48) ಮೃತರು. ‘ಶಿಂಧೊಳ್ಳಿಯ ಮಸಣವ್ವ ದೇವಸ್ಥಾನಕ್ಕೆ ಗುರುವಾರ ಕಳ್ಳರು ನುಗ್ಗಿದ್ದರು. ಇದೇ ವೇಳೆ, ಭಾರತಿ ತಮ್ಮ ಮನೆಯ ದನ-ಕರುಗಳ ಸಗಣಿ ಎತ್ತಿ, ತಿಪ್ಪೆಗೆ ಎಸೆಯಲು ಹೋಗಿದ್ದರು. ಆಗ ದೇವಾಲಯದಲ್ಲಿ ಕಳ್ಳತನ ನಡೆಯುತ್ತಿರುವುದನ್ನು ನೋಡಿದ್ದರು. ಈ ವಿಷಯ ಗ್ರಾಮಸ್ಥರಿಗೆ ಗೊತ್ತಾಗಿ, ತಾವು ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಕಳ್ಳರು ಭಾರತಿ ಅವರನ್ನೇ ಬಾವಿಯಲ್ಲಿ …

Read More »

ಕಳ್ಳತನ ಪ್ರಕರಣಗಳು: ಪತ್ತೆಯಾಗದ ಆರೋಪಿಗಳು

ಬ್ಯಾಡಗಿ: ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿಗಳು ಮಾತ್ರ ಪತ್ತೆಯಾಗುತ್ತಿಲ್ಲ. ಇದರಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದ್ದು, ಕಳ್ಳರನ್ನು ಪತ್ತೆ ಮಾಡುವಂತೆ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ. ಮನೆಗಳು ಹಾಗೂ ಇತರ ಸ್ಥಳಗಳಿಗೆ ನುಗ್ಗುತ್ತಿರುವ ಕಳ್ಳರು, ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ. ಕಳ್ಳತನದ ಬಗ್ಗೆ ಸಂತ್ರಸ್ತರು, ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ, ಆರೋಪಿಗಳ ಬಗ್ಗೆ ಇದುವರೆಗೂ ಸುಳಿವು ಲಭ್ಯವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ. …

Read More »

ಮೂಡ ಪ್ರಕರಣದಲ್ಲಿ ಹಿನ್ನಡೆ – ಸಿಎಂ ಕಾನೂನು ತಜ್ಞರ ತಂಡಕ್ಕೆ ಗೇಟ್ ಪಾಸ್.?

ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನವರಿಗೆ ಭಾರಿ ಹಿನ್ನಡೆಯಾದ ಕಾರಣ ಕಾನೂನು ತಜ್ಞರ ತಂಡಕ್ಕೆ ಗೇಟ್ ಪಾಸ್ ನೀಡಲು ಸಿಎಂ ನಿರ್ಧರಿಸಿದ್ದಾರೆ. ಮುಡಾ ಹಗರಣ ಹಾಗೂ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ರದ್ದುಗೊಳಿಸುವಂತೆ ಸಿಎಂ ಹೈ ಕೋರ್ಟ್ ಮೊರೆಹೋಗಿದ್ದರು, ಆದರೆ ಅಲ್ಲಿ ಸಿದ್ದರಾಮಯ್ಯ ನವರಿಗೆ ಸಾಲು ಸಾಲು ಹಿನ್ನಡೆಯಾಗುತ್ತಿರುವ ಕಾರಣ ಕಾನೂನು ತಜ್ಞರ ತಂಡವನ್ನು ಬದಲಾವಣೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ.     ಇದೀಗ ಸಚಿವ ಸಂಪುಟ …

Read More »

ನಿಮಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯವೇ?; ಮೊದಲು ರಾಜೀನಾಮೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಗಾಲಿ ಜನಾರ್ಧನ ರೆಡ್ಡಿ ಆಗ್ರಹ

ಬೆಂಗಳೂರು: ಇಷ್ಟೆಲ್ಲ ಆದರೂ ಇನ್ನೂ ಕುರ್ಚಿಗೆ, ಅಧಿಕಾರಕ್ಕೆ ಅಂಟಿಕೊಂಡಿರುವ ಸಿಎಂ ಸಿದ್ದರಾಮಯ್ಯನವರಿಗೆ ಏನು ಹೇಳಬೇಕು? ಅಂದು ಗಣಿ ಲೂಟಿ ಎಂದು ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದ್ರಿ. ಇಂದು ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ನಿಮ್ಮ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ಆದರೂ ರಾಜೀನಾಮೆ ನೀಡದೇ ಇರುವುದನ್ನು ನೋಡಿದರೆ ಯಾವ ಮಟ್ಟಕ್ಕೆ ತಲುಪಿದ್ದೀರಿ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ, ಅಂದು ಬಿಜೆಪಿ …

Read More »

ಬೇಕರಿ ಐಟಂಗಳ ಮೇಲೆ ಆಹಾರ ಇಲಾಖೆ ಕಣ್ಣು!

ದಸರಾ, ದೀಪಾವಳಿ ಹಬ್ಬ (Dasara And Deepavali) ಬಂತು ಅಂದ್ರೆ ನೆನಪಾಗೋದು ರುಚಿರುಚಿಯಾದ ಸ್ವೀಟ್‌ಗಳು (Sweets). ಈ ಹಬ್ಬಗಳಲ್ಲಿ ಸ್ವೀಟ್ ಹಂಚಿ ಸಂಭ್ರಮಿಸ್ತಾರೆ. ಆದರೆ ಇದೀಗ ಸ್ವೀಟ್‌ಗಳಲ್ಲೂ ಕಲಬೆರಕೆ (Mixing) ಪದಾರ್ಥ ಇದ್ಯಾ ಅನ್ನೋ ಅನುಮಾನ ಶುರುವಾಗಿದೆ. ಈ ಹಿನ್ನೆಲೆ ಸ್ವೀಟ್ಸ್‌ಗಳ ಗುಣಮಟ್ಟ ಪರಿಶೀಲನೆಗೆ ಆಹಾರ ಇಲಾಖೆ (Department of Food) ಮುಂದಾಗಿದೆ. ಈ ಕಲಿಗಾಲದಲ್ಲಿ ಕಲಬೆರಕೆ ಇಲ್ದಿರೋ ಆಹಾರನೇ ಇಲ್ವಾ ಅನ್ನೋ ಅನುಮಾನ ಹುಟ್ಕೊಂಡ್‌ ಬಿಟ್ಟಿದೆ. ಕಲಬೆರಕೆ ಆಹಾರ …

Read More »

ಮುಡಾ ಹಗರಣ ; ‘FIR’ ದಾಖಲಾದ್ರೆ CM ಸಿದ್ದರಾಮಯ್ಯ A-1, ಪತ್ನಿ ಪಾರ್ವತಿ A-2 ಆರೋಪಿ.!

ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು, ಎಫ್ ಐ ಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ಕೋರ್ಟ್ ಸೂಚನೆ ನೀಡಿದೆ. ಇಂದೇ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲಿಸುವ ಸಾಧ್ಯತೆಯಿದೆ. ಒಂದು ವೇಳೆ ಎಫ್ ಐ ಆರ್ ದಾಖಲಾದ್ರೆ ಸಿದ್ದರಾಮಯ್ಯ ಎ1, ಪತ್ನಿ ಪಾರ್ವತಿ ಎ 2 ಆರೋಪಿಗಳಾಗಲಿದ್ದಾರೆ. ಈ ಕುರಿತಂತೆ ಸ್ನೇಹಮಯಿ ಕೃಷ್ಣ ಅವರು ಈಗಾಗಲೇ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ನೇಹಮಯಿ ಕೃಷ್ಣ …

Read More »

ದರ್ಶನ್‌ ಆತಿಥ್ಯಕ್ಕೆ ಜೈಲಾಧಿಕಾರಿಗಳಿಗೆ 8 ಲಕ್ಷ ಡೀಲ್‌?

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಮತ್ತು ಕುಖ್ಯಾತ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ಇತರರಿಗೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಲಕ್ಷಾಂತರ ರೂ. ಆಸೆಗೆ ವಿಶೇಷ ಆತಿಥ್ಯ ನೀಡಿರುವುದು ಆಗ್ನೇಯ ವಿಭಾಗದ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಸುಮಾರು 6-8 ಲಕ್ಷ ರೂ.ಗೆ ಡೀಲ್‌ ನಡೆದಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ಈಗಾಗಲೇ ಆಗ್ನೇಯ ವಿಭಾಗದ ಪೊಲೀಸರು ವರದಿ ಸಿದ್ಧಪಡಿಸಿದ್ದು, ಒಂದೆರಡು ದಿನಗಳಲ್ಲೇ …

Read More »

ಕರೆಂಟ್ ಶಾಕ್ ಹೊಡೆದು ಅಣ್ಣ-ತಮ್ಮ ಇಬ್ಬರೂ ಸಾವು

ವಿಜಯಪುರ: ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಅಣ್ಣ-ತಮ್ಮ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ತಿಕೋಟಾದ ಬಾಬಾನಗರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಅಣ್ಣ ರಾಜಕುಮಾರ ವಿಜಾಪುರ ಹಾಗೂ ತಮ್ಮ ಶ್ರೀಕಾಂತ್ ವಿಜಾಪುರ ಮೃತ ಸಹೋದರರು.   ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಬ್ಬಿಣದ ಆಂಗಲ್ ಗೆ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.

Read More »