Breaking News

Daily Archives: ಜನವರಿ 27, 2023

ಬಿಜೆಪಿ ಹೈಕಮಾಂಡ್​ ಸೂಚನೆ ಬೆನ್ನಲ್ಲೇ ಸೈಲೆಂಟ್​ ಆದ ಶಾಸಕ ಯತ್ನಾಳ್​​: ಯಡಿಯೂರಪ್ಪ ಬಗ್ಗೆ ಮಾತನಾಡದಂತೆ ಸೂಚನೆ

ವಿಜಯಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Yediyurappa) ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ನಮ್ಮ ಹೈಕಮಾಂಡ್ ಹೇಳಿದ ತಕ್ಷಣ ನಾನು ಸಾಫ್ಟ್ ಆಗಲೇಬೇಕಲ್ಲ. ಇನ್ಮುಂದೆ ಯಡಿಯೂರಪ್ಪ ಬಗ್ಗೆ‌ ನನಗೆ ಪ್ರಶ್ನೆ ಕೇಳಬೇಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮನವಿ ಮಾಡಿದರು. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಹೈಕಮಾಂಡ್​ ಸೂಚನೆ ಬೆನ್ನಲ್ಲೇ ಯತ್ನಾಳ್​ ಸೈಲೆಂಟ್ ಆಗಿದ್ದಾರೆ.​ ಯಡಿಯೂರಪ್ಪ ಬಗ್ಗೆ ನನಗೆ ಗೌರವವಿದೆ, ಅವರ ಬಗ್ಗೆ ಮಾತನಾಡಲ್ಲ. ಯಡಿಯೂರಪ್ಪ ಹಿರಿಯರಿದ್ದಾರೆ ಬೈಯ್ಯೋದು ಬೇಡ ಅಂದಿದ್ದಾರೆ. ಇನ್ಮುಂದೆ ಬಿಎಸ್​ವೈ …

Read More »

ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಲಂಚ ಹಾವಳಿಗೆ ಬ್ರೇಕ್,ಕಾವೇರಿ 2.0: ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಪಾಸ್​ಪೋರ್ಟ್​ ಮಾದರಿ ಸೇವೆ

ಸಬ್​ ರಿಜಿಸ್ಟ್ರಾರ್​ ಕಚೇರಿಗಳ ಸೇವೆಗೆ ವೇಗ, ಲಂಚದ ಆರೋಪದಿಂದ ಮುಕ್ತಿ, ದಲ್ಲಾಳಿಗಳ ಹಾವಳಿಗೆ ಬ್ರೇಕ್​ ಹಾಕಲು ಕಾವೇರಿ 2.0 ತಂತ್ರಾಂಶ ಬಳಕೆಗೆ ಬರಲಿದೆ. ಪಾಸ್​ಪೋರ್ಟ್​ ಮಾದರಿ ಸೇವೆ ಒದಗಿಸಲು ಉಪ ನೋಂದಣಿ ಕಚೇರಿಗಳಲ್ಲಿ ಹೊಸ ಸ್ಟ್​ಾವೇರ್​ ಅಳವಡಿಸಲು ಕಂದಾಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ 260 ಸಬ್​ ರಿಜಿಸ್ಟ್ರಾರ್​ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ದಿನಕ್ಕೆ ಅಂದಾಜು 10 ಸಾವಿರ ದಾಖಲೆ ಪತ್ರಗಳ ನೋಂದಣಿ, ದೃಢೀಕರಣ ಪತ್ರಗಳ ಸೇವೆ ಒದಗಿಸುತ್ತಿವೆ. ಸರ್ಕಾರದ ಬೊಕ್ಕಸ …

Read More »

ಸೋಮಾಲಿಯಾದಲ್ಲಿ ಐಸಿಸ್ ನಾಯಕ ಸೇರಿ 10 ಮಂದಿ ಭಯೋತ್ಪಾದಕರ ಹತ್ಯೆ

ಸೋಮಾಲಿಯಾದಲ್ಲಿ ಐಸಿಸ್ ನಾಯಕ ಬಿಲಾಲ್ ಸೇರಿ ಒಟ್ಟು 10 ಮಂದಿ ಭಯೋತ್ಪಾದಕರನ್ನು ಅಮೆರಿಕ ಮಿಲಿಟರಿ ಹೊಡೆದುರುಳಿಸಿದೆ. ಈ ಕುರಿತು ಅಮೆರಿಕ ಸರ್ಕಾರ ಮಾಹಿತಿ ನೀಡಿದೆ. ಸೋಮಾಲಿಯಾದಲ್ಲಿ ಐಸಿಸ್ ನಾಯಕ ಬಿಲಾಲ್ ಸೇರಿ ಒಟ್ಟು 10 ಮಂದಿ ಭಯೋತ್ಪಾದಕರನ್ನು ಅಮೆರಿಕ ಮಿಲಿಟರಿ ಹೊಡೆದುರುಳಿಸಿದೆ. ಈ ಕುರಿತು ಅಮೆರಿಕ ಸರ್ಕಾರ ಮಾಹಿತಿ ನೀಡಿದೆ. ಬಿಲಾಲ್ ಈ ಸಂಘಟನೆಯ ಪ್ರಮುಖ ಹಣಕಾಸು ಸಹಾಯಕನಾಗಿದ್ದ. ಅಧಿಕಾರಿಗಳ ಪ್ರಕಾರ ಬಿಲಾಲ್-ಅಲ್ ಸುದಾನಿ ಆಫ್ರಿಕಾದ್ಯಂತ ಐಸಿಸ್​ ಅನ್ನು ವಿಸ್ತರಿಸಲು ಹಾಗೂ ಇತರೆ ಚಟುವಟಿಕೆಗಳನ್ನು …

Read More »

ವಿಜಯನಗರ ವಸಂತ ವೈಭವ ಮೆರವಣಿಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ

    ವಿಜಯನಗರ : ಹಂಪಿ ಉತ್ಸವದ ಮೆರಗನ್ನ ವಸಂತ ವೈಭವ ಮೆರವಣಿಗೆ ಇನ್ನಷ್ಟು ಹೆಚ್ಚಿಸಿದೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.   ಇಂದು ಹಂಪಿ ಉತ್ಸವದ ಅಂಗವಾಗಿ ಹೊಸಪೇಟೆಯ ವಡಕರಾಯನ ದೇವಸ್ಥಾನದಿಂದ ಪ್ರಾರಂಭವಾದ ವಸಂತ ವೈಭವ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ದೇಶ ಮತ್ತು ರಾಜ್ಯದ ಜನತೆಗೆ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ನಿಟ್ಟಿನಲ್ಲಿ ಹಂಪಿ ಉತ್ಸವ …

Read More »

ಪೊಲೀಸ್ ಫೋನ್ ಇನ್ ಕಾರ್ಯಕ್ರಮ; 6ನೇ ಕಾರ್ಯಕ್ರಮದಲ್ಲೂ ಸಮಸ್ಯೆಗಳ ಮಹಾಪೂರ

ಬೆಳಗಾವಿ : ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಆರಂಭಿಸಿರುವ ಫೋನ್ ಇನ್ ಕಾರ್ಯಕ್ರಮದ 6ನೇ ಕಾರ್ಯಕ್ರಮದಲ್ಲೂ ಅಕ್ರಮ ಮದ್ಯದ ಘಾಟು ಜೋರಾಗಿತ್ತು. ಬಂದಿದ್ದ 51 ಕರೆಗಳ ಪೈಕಿ ಅಗ್ರಸ್ಥಾನ ಅಕ್ರಮ ಮದ್ಯದ ಸಮಸ್ಯೆಗೆ. ಪೊಲೀಸರು ಸಾರ್ವಜನಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಆರಂಭಿಸಿರುವ ಪೋನ್ ಇನ್ ಕಾರ್ಯಕ್ರಮದ ಆರನೇ ಕಾರ್ಯಕ್ರಮ ಗುರುವಾರ ನಡೆಯಿತು. ಬೆಳಗಾವಿ ಜಿಲ್ಲೆಯ ಜನರು ಪೋನ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ಒಟ್ಟೂ 51 ಕರೆಗಳನ್ನು ಸ್ವೀಕರಿಸಲಾಗಿದ್ದು, …

Read More »