ಬೆಂಗಳೂರು: ತಮ್ಮ ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ವ್ಯಾಪಾರಾ ಮಾಡುತ್ತಿದ್ದ ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಸಿಗಿಲ್ ವರ್ಗಿಸ್ ಮತ್ತು ವಿಷ್ಣುಪ್ರಿಯ ಬಂಧಿತ ಆರೋಪಿಗಳು. ಬೆಂಗಳೂರಿನ ಹುಳಿಮಾವು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಏನಿದು ಪ್ರಕರಣ? ಸಿಗಿಲ್ ವರ್ಗಿಸ್ ಮತ್ತು ವಿಷ್ಟುಪ್ರಿಯ ವಿದ್ಯಾಭ್ಯಾಸಕ್ಕಾಗಿ ಕೇರಳದಿಂದ ಬೆಂಗಳೂರಿಗೆ ಬಂದಿದ್ದರು. ಆದರೆ ಡ್ರಗ್ಸ್ ಸೇವನೆ ಚಟಕ್ಕೆ ಬಿದ್ದಿದ್ದ ಇಬ್ಬರು ಪ್ರೇಮಿಗಳು ಐಷಾರಾಮಿ ಜೀವನ ನಡೆಸಲು ಪೆಡ್ಲಿಂಗ್ ನಡೆಸಲು ಶುರುಮಾಡಿದ್ದಾರೆ. ಕೇರಳ ಮತ್ತು ತಮಿಳುನಾಡಿನ ಕೊಯಮತ್ತೂರಿನಿಂದ ಡ್ರಗ್ಸ್ ತರಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ …
Read More »Yearly Archives: 2022
ಚಹಾದಲ್ಲೂ ಕಲಬೆರಕೆ; ಕಳಪೆ ಟೀ ಪೌಡರ್
ಮಂಗಳೂರು: ಚಹಾ ಪ್ರಿಯರೇ ಎಚ್ಚರ! ಕಡಿಮೆ ದರದಲ್ಲಿ ಕಲಬೆರಕೆ ಚಹಾ ಪುಡಿಯನ್ನು ದೊಡ್ಡ ಮಟ್ಟದಲ್ಲಿ ವಿತರಿಸುವ ಜಾಲ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಕಡಿಮೆ ದರ, ಆಕರ್ಷಕ ಬಣ್ಣಕ್ಕೆ ಮೈಮರೆತು ಅನೇಕ ಹೋಟೆಲ್, ಕ್ಯಾಂಟೀನ್ ಮಾಲೀಕರು ಇದನ್ನು ಖರೀದಿಸುತ್ತಾರೆ. ಈ ಕಳಪೆ ಚಹಾ ಪುಡಿ ವಹಿವಾಟು ನ್ಯಾಯಯುತ ವಾಗಿ ಚಹಾ ಪುಡಿ ವ್ಯಾಪಾರ ಮಾಡುವವರಿಗೆ ಹೊಡೆತ ನೀಡಿದೆ. ಎಲ್ಲೆಲ್ಲಿದೆ ದಂಧೆ?: ತಮಿಳುನಾಡಿನ ವಿರುಧುನಗರದಿಂದ ರಾಜ್ಯಕ್ಕೆ ನಕಲಿ ಟೀಪುಡಿ ಪೂರೈಕೆಯಾಗುತ್ತದೆ. …
Read More »40 ಸಾವಿರ ರೂಪಾಯಿ ಕೊಟ್ರೆ ಸಿಗಲಿವೆ ಅಂಕಪಟ್ಟಿ!; ಫೇಲಾದ ವಿದ್ಯಾರ್ಥಿಗಳೇ ಟಾರ್ಗೆಟ್
ಬೆಂಗಳೂರು: ಪದವೀಧರರಾಗಲು ಹಗಲು-ರಾತ್ರಿ ಕಷ್ಟಪಟ್ಟು ಓದಬೇಕು. ಕೆಲವೊಮ್ಮೆ ಇನ್ನಿಲ್ಲದಂತೆ ಅಭ್ಯಾಸ ಮಾಡಿದರೂ ಕೆಲವರು ಪಾಸ್ ಆಗಲ್ಲ. ಆದರೆ, ಬರೀ 40 ಸಾವಿರ ರೂ. ಕೊಟ್ಟರೆ ಸಾಕು, ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳೇ ನಿಮಗೆ ಸಿಗುತ್ತೆ! ಅದೂ ಹಣ ಕೊಟ್ಟ 20 ದಿನದಲ್ಲೇ! ಹೌದು, ಅಚ್ಚರಿ ಎನಿಸಿದರೂ ಇದು ನಿಜ. ದೇಶದ ವಿವಿಧ ವಿವಿಗಳ ಪದವಿಯ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ಜಾಲ ಬೆಳಕಿಗೆ ಬಂದಿದೆ. ಬೆಂಗಳೂರಿನ …
Read More »ಕಸ ಸಂಗ್ರಹಣಾ ಆಟೋಗೆ ಚಂದನಾ ಡ್ರೈವರ್! ಗಂಡ-ಅತ್ತೆಯ ಸಹಕಾರ, ಆತ್ಮಬಲವೇ ಈಕೆಗೆ ಶ್ರೀರಕ್ಷೆ
ಬೆಂಗಳೂರು ಗ್ರಾಮಾಂತರ :ಹೆಣ್ಮಕ್ಕಳು ಆಟೋ ಓಡಿಸೋದಾ, ಅದೂ ಮನೆಮನೆಯಿಂದ ಕಸ ತೆಗೆದುಕೊಳ್ಳೋ ಆಟೋಗೆ ಡ್ರೈವರ್ರಾ! ಇಂಥ ಮೂದಲಿಕೆ, ಮುಜುರಗಳಿಗೆಲ್ಲ ಸೆಡ್ಡು ಹೊಡೆದು ಕಸ ಸಂಗ್ರಹಣೆ ಆಟೋವೊಂದಕ್ಕೆ ಚಾಲಕಿಯಾಗಿ ಇದೇ ಮೂದಲಿಗೆ ಜನರಿಂದಲೇ ಶಹಬ್ಬಾಸ್ಗಿರಿ ಪಡೆಯುತ್ತಿದ್ದಾರೆ ತೂಬಗೆರೆ ಚಂದನಾ! ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಸ ಸಂಗ್ರಹಣೆ ಆಟೋಗೆ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರವಾಗಿದ್ದಾರೆ. ತೂಬಗೆರೆಯ ಸ್ತ್ರೀಶಕ್ತಿ ಸಂಘಟನೆ ಸದಸ್ಯೆಯಾಗಿದ್ದ ಚಂದನಾ, ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಪಾಲಕರ ಒತ್ತಾಸೆಯಂತೆ …
Read More »ಬೆತ್ತಲೆ ದೇಹ ತೋರಿಸು ಎಂದ ನೆಟ್ಟಿಗನಿಗೆ ನಟಿ ಯಶಿಕಾ ಆನಂದ್ ಕೊಟ್ಟ ಖಡಕ್ ಉತ್ತರ ಹೀಗಿತ್ತು
ಚೆನ್ನೈ: ಕಾಲಿವುಡ್ನ ವಯಸ್ಕರ ಕಾಮಿಡಿ ಚಿತ್ರ ‘ಇರುಟ್ಟು ಅರಯಿಲ್ ಮುರಟ್ಟು ಕುತ್ತು’ ಚಿತ್ರ ಹಾಗೂ ಬಿಗ್ಬಾಸ್ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಅವರು ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡಿದ್ದು, ಈಗಷ್ಟೇ ತಾನೇ ಸಹಜ ಜೀವನಕ್ಕೆ ಮರಳಿದ್ದಾರೆ. ಅಪಘಾತದ ಬಳಿಕ ಯಶಿಕಾ ಅವರು ಅನೇಕ ಸರ್ಜರಿಗೆ ಒಳಗಾಗಬೇಕಾಯಿತು. ಸದ್ಯ ಗುಣಮುಖರಾಗಿರುವ ಅವರು ಮತ್ತೆ ಸಾಮಾಜಿಕ ಜಾಲತಾಣದತ್ತ ಮುಖ ಮಾಡಿದ್ದಾರೆ. ಜಾಲತಾಣದಲ್ಲಿ ಸಕ್ರೀಯರಾಗಿದ್ದು, …
Read More »ಅಧಿಕಾರಿಯ ಲಂಚದ ಹಣ ಮನೆಯಲ್ಲಿ ಇಟ್ಟುಕೊಂಡಿದ್ದ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳ ದಾಳಿ ವೇಳೆ ಲಕ್ಷಾಂತರ ರೂಪಾಯಿ ಹಣವೂ ಪತ್ತೆ
ಧಾರವಾಡ: ಇನ್ನೊಬ್ಬ ಅಧಿಕಾರಿಯ ಲಂಚದ ಹಣ ಮನೆಯಲ್ಲಿ ಇಟ್ಟುಕೊಂಡಿದ್ದ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳ ದಾಳಿ ವೇಳೆ ಲಕ್ಷಾಂತರ ರೂಪಾಯಿ ಹಣವೂ ಪತ್ತೆಯಾಗಿದೆ. ಸಣ್ಣ ನೀರಾವರಿ ಇಲಾಖೆಯ ಧಾರವಾಡ ಉಪವಿಭಾಗದಲ್ಲಿನ ತನಿಖಾ ವಿಭಾಗದ ಎಇಇ ಪ್ರಶಾಂತ್ ನಗದು ಸಹಿತ ಸಿಕ್ಕಿಬಿದ್ದ ಅಧಿಕಾರಿ. ಇವರು ಅದೇ ಇಲಾಖೆಯ ಇನ್ನೊಬ್ಬ ಅಧಿಕಾರಿ ಶಿವಪ್ಪ ಮಂಜಿನಾಳಗೆ ಹಸ್ತಾಂತರಿಸಬೇಕಿದ್ದ ಲಂಚದ ಹಣವನ್ನು ವಿದ್ಯಾಗಿರಿ ಸತ್ತೂರ ಕಾಲನಿಯಲ್ಲಿರುವ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ಶಿವಪ್ಪ ಮಂಜಿನಾಳನ ಸೋದರನ ಮಗ ಮಹಾಂತೇಶ …
Read More »ಭ್ರಷ್ಟಾಚಾರ ವಿರುದ್ಧ ಫೈಟ್ ಮಾಡ್ತೇನೆ: ಜೈಲು ನನ್ನಲ್ಲಿ ಪರಿವರ್ತನೆ ತಂದಿದೆ: ವಕೀಲ ಜಗದೀಶ್
ಬೆಂಗಳೂರು, ಮಾ. 08: “ನನಗಾಗಿ ಕನ್ನಡಿಗರು ಮಿಡಿದಿದ್ದಾರೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಸುತ್ತೇನೆ. ಸಣ್ಣ ವಿಚಾರಗಳಿಂದ ನನ್ನ ಹೋರಾಟ ಹಳಿ ತಪ್ಪಿತ್ತು. ಪಾಸಿಬಲಿ ಪರಿಸ್ಥಿತಿಯೋ ಗೊತ್ತಿಲ್ಲ. ಅದು ಜೈಲು ಇಲ್ಲ. ಪರಿವರ್ತನೆಯ ಜಾಗ. ನನ್ನಲ್ಲಿ ಜೈಲು ಪರಿವರ್ತನೆ ತಂದಿದೆ” ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ 24 ದಿನ ಜೈಲಿನಲ್ಲಿದ್ದ ವಕೀಲ ಜಗದೀಶ್ ಮಹದೇವ್ ಅವರು ಮಂಗಳವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಎರಡೂ ಪ್ರಕರಣದಲ್ಲಿ ಜಾಮೀನು ಸಿಕ್ಕ …
Read More »ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ; ನಾಲ್ವರ ಬಂಧನ..!
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮತ್ತೊಂದು ಕರಾಳಮುಖ ಬಯಲಾಗಿದೆ. ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹಿಂದೆ ವೇಶ್ಯಾವಾಟಿಕೆ ದಂಧೆಯಲ್ಲಿ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಂತ್ರಸ್ಥರನ್ನು ಮಂಗಳೂರು ಪೊಲೀಸರು ರಕ್ಷಿಸಿದ್ದರು. ಇದೀಗ ಮತ್ತೊಬ್ಬ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಮಂಗಳೂರು ಪೊಲೀಸರು ಮತ್ತೆ ಪ್ರತ್ಯೇಕ 4 ಪೋಕ್ಸೋ ಪ್ರಕರಣ ಸೇರಿದಂತೆ …
Read More »ದೆಹಲಿ ಕರ್ನಾಟಕ ಭವನದಲ್ಲಿ ಐವರು ಐಎಎಸ್ಗಳು ಏಕೆ? ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: ‘ಕರ್ನಾಟಕ ಭವನದಲ್ಲಿ ಐವರು ಐಎಎಸ್/ಐಎಫ್ಎಸ್ ಅಧಿಕಾರಿಗಳು ಇದ್ದಾರೆ. ಅಷ್ಟೊಂದು ಮಂದಿ ಅಲ್ಲೇನು ಕೆಲಸ ಮಾಡುತ್ತಿದ್ದಾರೆ. ಇದು ಅನಗತ್ಯ ವೆಚ್ಚಕ್ಕೆ ಸಾಕ್ಷಿ’ ಎಂದು ಸಿದ್ದರಾಮಯ್ಯ ಟೀಕಿಸಿದರು. ‘ನಮ್ಮ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಭವನದಲ್ಲಿ ಒಬ್ಬರೇ ಐಎಎಸ್ ಅಧಿಕಾರಿ ಇದ್ದರು. ಅಷ್ಟೊಂದು ಮಂದಿ ಅಲ್ಲೇನು ಕೆಲಸ ಮಾಡುತ್ತಿದ್ದಾರೆ. ಇದು ಅನಗತ್ಯ ವೆಚ್ಚಕ್ಕೆ ಸಾಕ್ಷಿ’ ಎಂದು ಸಿದ್ದರಾಮಯ್ಯ ಟೀಕಿಸಿದರು. ‘ನಮ್ಮ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಭವನದಲ್ಲಿ ಒಬ್ಬರೇ ಐಎಎಸ್ ಅಧಿಕಾರಿ ಇದ್ದರು. ಈಗ …
Read More »ಬ್ಯಾಂಕ್ ಪರೀಕ್ಷೆ ಬರೆಯುವವರಿಗೆ ಉಚಿತ ತರಬೇತಿ, ಮಾರ್ಚ್ 12 ರೊಳಗೆ ಅರ್ಜಿ ಸಲ್ಲಿಸಿ
ಬೆಂಗಳೂರು,ಮಾ.9- ಬ್ಯಾಂಕ್ ಪರೀಕ್ಷೆ ಕಟ್ಟುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಕೃಷಿಕ್ ಸರ್ವೋದಯ ಫೌಂಡೇಷನ್ ನವರು ಮಾರ್ಚ್ 14ರಿಂದ ಆನ್ಲೈನ್ ಹಾಗೂ ಆಫ್ಲೈನ್ ತರಬೇತಿ ನೀಡುತ್ತಿದ್ದು ಆಸಕ್ತರು ಮಾರ್ಚ್ 12 ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಹೆಸರು ನೋಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಂ.15, 2ನೇ ಹಂತ, ಎಚ್ಎಎಲ್ ಹಳೇ ವಿಮಾನ ನಿಲ್ದಾಣ ರಸ್ತೆ, ಗಾಲ್ಫ್ ಅವೆನ್ಯೂ ರಸ್ತೆ, ಕೋಡಿಹಳ್ಳಿ, ಬೆಂಗಳೂರು-08 ಅಥವಾ ಇ-ಮೇಲ್: ksfbangalore@gmail.com ಅಥವಾ ವೆಬ್ ವಿಳಾಸ: www.ksfkarnataka.com ಅಥವಾ ಮೊಬೈಲ್ ನಂಬರ್ …
Read More »