Breaking News

Yearly Archives: 2022

ಮಗು ಅಪಹರಣ ಮಾಡಿ, ಹಣಕ್ಕೆ ಬೇಡಿಕೆ ಇಟ್ಟ, ಖತರ್ನಾಕ ಗ್ಯಾಂಗ ಪತ್ತೆ ಹಚ್ಚಿದ, ಸಂಕೇಶ್ವರ ಪೋಲಿಸರು,

ದಿನಾಂಕ: 02/08/2022 ರಂದು ಒಂಬತ್ತು ನಾಲವತ್ತ ಗಂಟೆಗೆ, ಭಾಸ್ಕರ ಪ್ರಕಾಶ ಕಾಕಡೆ, ಸಾಕಿನ್ ಮಾಳಿಗಲ್ಲಿ ಸಂಕೇಶ್ವರ ತಾಲ್ಲೂಕು ಹುಕ್ಕೇರಿ ಇವರು ಸಂಕೇಶ್ವರ ಪೊಲೀಸ ಠಾಣಿಗೆ ಹಾಜರಾಗಿ ನನ್ನ ಅಪ್ರಾಪ್ತ ಹದಿನಾಲ್ಕು ವರ್ಷ ವಯಸ್ಸಿನ ಮಗನು ದಿನಾಲು ಶಾಲೆ ಮುಗಿಸಿಕೊಂಡ ಟೂಶನಕ್ಕೆ ಹೋಗುತ್ತಾನೆ. ಸದರಿಯವನು ದಿನಾಂಕ: 02/08/2022 ರಂದು ಸಂಜೆ ಟೊಶನಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಯಾರೋ ಅಪರಿಚಿತ ಆರೋಫಿತನು ತನ್ನ ಮಗನ ಹತ್ತಿರ ಬಂದು ನಿಮ್ಮ ತಂದೆಗೆ ನಿಪ್ಪಾಣಿಯಲ್ಲಿ …

Read More »

ರಾಜಕಾರಣದ ಸೋಂಕನ್ನು ಅಂಟಿಸಿಕೊಳ್ಳದ ಮಠಾಧೀಶ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರು

ಧಾರವಾಡ : ತಮ್ಮ 89 ವರ್ಷಗಳ ಸುದೀರ್ಘ ಸನ್ಯಾಸದ ಬದುಕಿಗೆ ರಾಜಕಾರಣದ ಸೋಂಕನ್ನು ಅಂಟಿಸಿಕೊಳ್ಳದೇ ತಮ್ಮೊಳಗಿನ ತಪೋಬಲದಿಂದ ಸದಾಕಾಲವೂ ಭಕ್ತರ ಒಳಿತನ್ನೇ ಬಯಸಿರುವ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರು ಓರ್ವ ಆದರ್ಶ ಮಠಾಧೀಶರೆನಿಸಿದ್ದಾರೆ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು. ಅವರು ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ 89ನೆಯ ವರ್ಧಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧರ್ಮ ಜಾಗೃತಿಗೆ ಮತ್ತು ಸಂಸ್ಕೃತಿ-ಸಂಸ್ಕಾರದ …

Read More »

ನೀವು ಸುಟ್ಟಿದ್ದು ಭಾವಚಿತ್ರವಲ್ಲ ಭಾರತ ಮಾತೆ‌ಯನ್ನು.. ಮುತಾಲಿಕ್​ ಆಕ್ರೋಶ

ಧಾರವಾಡ : ಧಾರವಾಡದಲ್ಲಿ ಸಾವರ್ಕರ್ ಫೋಟೋ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. ಸಾವರ್ಕರ್ ಭಾವಚಿತ್ರ ಸುಟ್ಟು ಹಾಕಿದ್ದು ಹೇಯ ಕೃತ್ಯ, ಇದು ದೇಶದ್ರೋಹಿ‌ ಕೃತ್ಯ. ನೀವು ಸುಟ್ಟಿದ್ದು ಭಾವಚಿತ್ರವಲ್ಲ, ಭಾರತ ಮಾತೆ‌ಯನ್ನು ಸುಡುತ್ತಿದ್ದೀರಿ ಎಂದು ಮುತಾಲಿಕ್​ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಅವರು, ಸಾವರ್ಕರ್ ಅರ್ಧ ಜೀವನ ಜೈಲಿನಲ್ಲಿ ಕಳೆದವರು ನಿಮಗೆ ದೇಶಭಕ್ತಿ ಇಲ್ಲ. ನಿಮಗೆ ಸಿದ್ದರಾಮಯ್ಯ ಬೇಕು. ನಿಮ್ಮ ಉದ್ದೇಶ ಏನು? ಎಂದು …

Read More »

ಗೋಕಾಕದಲ್ಲಿ ರಾಯಣ್ಣ ಭಾವಚಿತ್ರ ಹರಿದ ಕಿಡಿಗೇಡಿಗಳು

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಗೋಕಾಕ ತಾಲೂಕಿನ ‌ಖನಗಾಂವ ಗ್ರಾಮದಲ್ಲಿ ನಡೆದಿದೆ. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ‌ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ‌. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಗ್ರಾಮದ ರಸ್ತೆಗೆ ರಾಯಣ್ಣ ಸರ್ಕಲ್ ಎಂದು ನಾಮಕರಣ ಮಾಡಲಾಗಿತ್ತು. ನಾಮಕರಣ ಮಾಡಿ ರಾಯಣ್ಣ ಭಾವಚಿತ್ರದ ಫ್ಲೆಕ್ಸ್ ಬೋರ್ಡ್ …

Read More »

ಹುಬ್ಬಳ್ಳಿಯಲ್ಲಿ ಜೋರಾಯ್ತು ʻಸಾವರ್ಕರ್‌ ಕಿಚ್ಚುʼ : ಬಿಜೆಪಿ ಕಾರ್ಯಕರ್ತರಿಂದ ʻ ಎಂ.ಬಿ.ಪಾಟೀಲ್‌ ಕಾರಿಗೆ ಮುತ್ತಿಗೆ ʼ

ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತಷ್ಟು ಜೋರಾಯ್ತು ಸಾವರ್ಕರ್‌ ಕಿಚ್ಚು ಹೆಚ್ಚಾಗಿದ್ದು. ನಿನ್ನೆ ಕಾಂಗ್ರೆಸ್‌ ಕಾರ್ಯಕರ್ತರು ಸಾವರ್ಕರ್‌ ಫೋಟೋಗೆ ಬೆಂಕಿ ಹಾಕಿ ದಹನ ಮಾಡಿದ್ದಾರೆ. ಈ ಹಿನ್ನೆಲೆ ಇಂದು ಹುಬ್ಬಳ್ಳಿ ಕಾಂಗ್ರೆಸ್‌ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಎಂ.ಬಿ.ಪಾಟೀಲ್‌ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಹರಸಾಹಸ ಪಟ್ಟಿದ್ದಾರೆ. ಸಾವರ್ಕರ್‌ ಫೋಟೋ ಹಿಡಿದು ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿದೆ.

Read More »

ಸಚಿವ ಮಾಧುಸ್ವಾಮಿ ಆಡಿಯೋ ವೈರಲ್​ ಬೆನ್ನಲ್ಲೇ ಹೊಸದೊಂದು ಬಾಂಬ್ ಸಿಡಿಸಿದ ಕೆ.ಎನ್.ರಾಜಣ್ಣ

ತುಮಕೂರು: ಸರ್ಕಾರ ನಡೆಯುತ್ತಿಲ್ಲ ಮ್ಯಾನೇಜ್​ ಮಾಡುತ್ತಿದ್ದೇವೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.   ರಾಜಣ್ಣ ಅವರ ಮಾತು ಕೇಳಿದರೆ, ತುಮಕೂರು ಜಿಲ್ಲೆಯ ಇಬ್ಬರು ಪ್ರಭಾವಿ ಬಿಜೆಪಿ ನಾಯಕರು ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರಾ ಅನ್ನೋ ಪ್ರಶ್ನೆ ಕಾಡ ತೊಡಗಿದೆ. ಸಚಿವ ಮಾಧುಸ್ವಾಮಿ ಸೇರಿದಂತೆ ಮತ್ತೊಬ್ಬ …

Read More »

ಪ್ರೀತಿಸಲು ಒಪ್ಪದಿದ್ದಕ್ಕೆ ಅಪಘಾತ ಮಾಡಿ ಯುವತಿಯ ಕೊಲೆ: ಪಾಗಲ್​ ಪ್ರೇಮಿಯ ಸಂಚು ತನಿಖೆಯಲ್ಲಿ ಬಯಲು

ಹಾಸನ: ಆತ ಆಕೆಯನ್ನು ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದ. ಆದರೆ ಪ್ರೀತಿಗೆ ಒಪ್ಪದ ಆಕೆಯನ್ನು ಅಪಘಾತ ಮಾಡಿ ಕೊಲೆ ಮಾಡಿದ್ದ. ಕೊಂದ ಬಳಿಕ ಈ ಪ್ರಕರಣದಿಂದ ಎಸ್ಕೇಪ್​ ಆಗಲು ಯತ್ನಿಸಿದ್ದ. ಆದರೆ, ಆತನ ಲೆಕ್ಕಚಾರ ಅಂದು ಕೊಂಡಂತೆ ನಡೆಯಲಿಲ್ಲ. ಪಾಪದ ಕೊಡ ತುಂಬಿತು ಎಂಬಂತೆ ಆತ ಮಾಡಿದ ಹೀನ ಕೃತ್ಯದಿಂದ ಇಂದು ಕಂಬಿ ಎಣಿಸುವ ಕಾಲ ಬಂದಿದೆ. ಹೌದು, ಇದು ಪಾಗಲ್​ ಪ್ರೇಮಿಯ ಭಯಾನಕ ಕೊಲೆ ಪ್ರಕರಣ. ಆಗಸ್ಟ್ 03ರಂದು ಹಾಸನದ …

Read More »

ಸರ್ಕಾರಿ ನೌಕರರಿಗೊಂದು ಮಹತ್ವದ ಮಾಹಿತಿ; ಬದಲಾಗಿದೆ ಪ್ರೊಬೆಷನ್‌ ಅವಧಿಯ ನಿಯಮ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯಿದೆ. ಸರ್ಕಾರ ನೌಕರರ ಪರೀಕ್ಷಾ ಅವಧಿಯ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮದ ಅಡಿಯಲ್ಲಿ ನೌಕರರು ಈಗ ತಮ್ಮ ಸಂಪೂರ್ಣ ವೇತನವನ್ನು ಪಡೆಯುತ್ತಾರೆ. ಮಧ್ಯಪ್ರದೇಶ ಸರ್ಕಾರವು ನೌಕರರಿಗಾಗಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಬದಲಾದ ನಿಯಮದ ಪ್ರಕಾರ ಹೊಸದಾಗಿ ನೇಮಕಗೊಂಡ ಉದ್ಯೋಗಿಗಳು ತಮ್ಮ ಪರೀಕ್ಷಣಾವಧಿಯಲ್ಲೂ ಸಂಪೂರ್ಣ ವೇತನವನ್ನು ಪಡೆಯುತ್ತಾರೆ. ನೇಮಕಗೊಂಡ ದಿನಾಂಕದಿಂದ ನೌಕರರಿಗೆ ಪೂರ್ಣವಾಗಿ ಸಂಬಳ ಪಾವತಿಸಲಾಗುವುದು. ಕಳೆದ ಮೂರು ವರ್ಷಗಳಿಂದ 5,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ …

Read More »

ಸಾವರ್ಕರ್ ಫೋಟೋಗೆ ಬೆಂಕಿ ಹಚ್ಚಿದ್ದ 12 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ಕಾರ್ಯಕರ್ತರು, ಮಡಿಕೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದರು.   ಇದು ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹೀಗೆ ಶುಕ್ರವಾರದಂದು ಧಾರವಾಡದಲ್ಲಿ ನಡೆದ ಪ್ರತಿಭಟನೆಯ ವೇಳೆ ಕೆಲವರು, ಸಾವರ್ಕರ್ ಅವರ ಭಾವಚಿತ್ರವನ್ನು ಕಾಲಿನಲ್ಲಿ ತುಳಿದು, ಅದರ ಮೇಲೆ ಮೊಟ್ಟೆ ಒಡೆದು ಬಳಿಕ …

Read More »

ಶಾಲಾ ಬಸ್ -ಕ್ಯಾಂಟರ್ ಅಪಘಾತ :ಇಬ್ಬರು ಚಾಲಕರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಬೆಳಗಾವಿ : ಶಾಲಾ ಬಸ್ ಮತ್ತು ಕ್ಯಾಂಟರ್ ನಡುವೆ ಢಿಕ್ಕಿ ಸಂಭವಿಸಿ ಎರಡೂ ವಾಹನಗಳ ಚಾಲಕರು ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಶಾಲಾ ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ತಿಳಿಸಿದ್ದಾರೆ.   ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅಥಣಿ ಪೊಲೀಸರು ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲು ನೆರವಾದರು. ಅಥಣಿ …

Read More »