Breaking News

Daily Archives: ಅಕ್ಟೋಬರ್ 1, 2020

ಶುಕ್ರನತ್ತ ಇಸ್ರೋ ಚಿತ್ತ ನೆಟ್ಟಿದೆ.

ಬೆಂಗಳೂರು, – ಅಂತರಿಕ್ಷ ಸಂಶೋಧನೆ ಮತ್ತು ಉಪಗ್ರಹಗಳ ಉಡಾವಣೆಯಲ್ಲಿ ಹೊಸ ಹೊಸ ಸಾಧನೆಗಳನ್ನು ಮಾಡಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ಸೌರ ಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರನತ್ತ ಇಸ್ರೋ ಚಿತ್ತ ನೆಟ್ಟಿದೆ. ಫ್ರಾನ್ಸ್‍ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿಎನ್‍ಇಎಸ್ ಸಹಭಾಗಿತ್ವದೊಂದಿಗೆ 2025ಕ್ಕೆ ವೀನಸ್ ಮಿಷನ್ (ಶುಕ್ರ ಗ್ರಹ ಯಾನ)ಕ್ಕೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ. ಈ ಸಂಬಂಧ ಇಸ್ರೋ ಅಧ್ಯಕ್ಷ …

Read More »

ಸಾಲಬಾಧೆ ಹಿನ್ನೆಲೆಯಲ್ಲಿ ವಿದ್ಯುತ್ ಮಗ್ಗದ ಮುಂದೆಯೇ ನೇಕಾರ ಆತ್ಮಹತ್ಯೆ

ಬೆಳಗಾವಿ: ಸಾಲಬಾಧೆ ಹಿನ್ನೆಲೆಯಲ್ಲಿ ವಿದ್ಯುತ್ ಮಗ್ಗದ ಮುಂದೆಯೇ ನೇಕಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ದೇವಾಂಗ ನಗರದಲ್ಲಿ ನಡೆದಿದೆ. ಸಂತೋಷ್ ಢಗೆ (39) ಆತ್ಮಹತ್ಯೆ ಮಾಡಿಕೊಂಡ ನೇಕಾರ. ನೇಕಾರ ಸಂತೋಷ್ ಸಾಲ ಮಾಡಿ 2 ವಿದ್ಯುತ್ ಮಗ್ಗ ಖರೀದಿ ಮಾಡಿದ್ದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಸಂಕಷ್ಟ ಎದುರಿಸಿದ್ದ. ಕುಟುಂಬ ನಿರ್ವಹಣೆ ಮಾಡಲಾಗದೇ, ಸಾಲ ತೀರಿಸಲಾಗದೆ ಸಾಲಗಾರರ ಕಾಟಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾನೆ.ಪತ್ನಿ, ಮಕ್ಕಳು ತವರು ಮನೆಗೆ ಹೋಗಿದ್ದ …

Read More »

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಂಗಳೂರು : ಪರಿಷತ್ ನಲ್ಲಿ ಎಪಿಎಂಸಿ, ಭೂಸುಧಾರಣೆ, ಕಾರ್ಮಿಕ ಕಾಯ್ದೆ ಪಾಸ್ ಆಗದ ಹಿನ್ನೆಲೆಯಲ್ಲಿ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಪಿಎಂಸಿ ಕಾಯ್ದೆ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳು ಪರಿಷತ್ ನಲ್ಲಿ ಪಾಸ್ ಆಗದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Read More »

ಜಾತಿ ಅಥವಾ ಗುಂಪಿನ ಪ್ರಶ್ನೆ ಇಲ್ಲಿ ಬರುವುದಿಲ್ಲ’ ಎಂದು ಕೆ‍ಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ, ಜನಪ್ರಿಯ ಮತ್ತು ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗೆ ಪಕ್ಷದ ಟಿಕೆಟ್‌ ಕೊಡುತ್ತೇವೆ. ಜಾತಿ ಅಥವಾ ಗುಂಪಿನ ಪ್ರಶ್ನೆ ಇಲ್ಲಿ ಬರುವುದಿಲ್ಲ’ ಎಂದು ಕೆ‍ಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇನ್ನೂ ಆಕಾಂಕ್ಷಿಗಳು ಮುಂದೆ ಬಂದಿಲ್ಲ. ಪಕ್ಷದ ವೇದಿಕೆಯಲ್ಲಿ ಚರ್ಚೆ ಆರಂಭವಾಗಿಲ್ಲ. 15 ದಿನಗಳಲ್ಲಿ ಮುಖಂಡರ ಸಭೆ ಕರೆದು ಸಮಾಲೋಚಿಸುತ್ತೇನೆ’ ಎಂದು ಹೇಳಿದರು. ‘ಶಿರಾ ಹಾಗೂ ರಾಜರಾಜೇಶ್ವರಿ ನಗರ …

Read More »

ಹತ್ರಾಸ್ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

ನವದೆಹಲಿ : ಹತ್ರಾಸ್ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಜೊತೆಗೂಡಿ ಸಂತ್ರಸ್ತೆ ಕುಟುಂಬ ಸದಸ್ಯರನ್ನು ಭೇಟಿಯಾಗಲು ದೆಹಲಿಯಿಂದ ಹೊರಟಿದ್ದರು. ಆದರೆ ಗ್ರೇಟರ್ ನೊಯ್ಡಾ ಬಳಿ ಅವರ ತಂಡವನ್ನು ಪೊಲೀಸರು ತಡೆದಿದ್ದಾರೆ. ಹೀಗಿರುವಾಗ ಕೇವಲ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಮಾತ್ರ ಹತ್ರಾಸ್‌ಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ದೆಹಲಿ ನೊಯ್ಡಾ ಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಆದರೀಗ …

Read More »

ಕ್ಯಾನ್ಸರ್ ಬಂದು ಸಾಯುವ ಮುಂಚೆ ಬರೆದ ಪತ್ರ…! “ಮರಣಕ್ಕಿಂತ ದೊಡ್ಡ ಸತ್ಯವೊಂದಿಲ್ಲ”…!!

ವಿಶ್ವ ವಿಖ್ಯಾತ ಫ್ಯಾಶನ್ ಡಿಸೈನರ್ ಮತ್ತು ಬರಹಗಾರ್ತಿಯಾದ ಕಿರ್ಸಿಡಾ ರೋಡ್ರಿಗಸ್ ಕ್ಯಾನ್ಸರ್ ಬಂದು ಸಾಯುವ ಮುಂಚೆ ಬರೆದ ಪತ್ರ…! 1) ವಿಶ್ವದಲ್ಲಿನ ಐಷಾರಾಮಿ ಕಾರುಗಳು ನನ್ನ ಮನೆಯಲ್ಲಿದೆ ಆದರೆ ನನ್ನ ಯಾತ್ರೆ ಮಾತ್ರ ವೀಲ್ ಚೈಯರ್’ನಲ್ಲಾಗಿದೆ..! 2) ನನ್ನ ಮನೆಯಲ್ಲಿ ಎಲ್ಲಾ ರೀತಿಯ ಬಟ್ಟೆಬರೆಗಳು ಮತ್ತು ಚಪ್ಪಲಿಗಳು ತುಂಬಿಕೊಂಡಿದೆ ಆದರೆ ಆಸ್ಪತ್ರೆಯಲ್ಲಿ ಸಣ್ಣ ತುಂಡು ವಸ್ತ್ರದೊಂದಿಗೆ ನನ್ನ ಶರೀರ ಸುತ್ತಿ ಮಲಗಿಸಿದ್ದಾರೆ..! 3) ಬ್ಯಾಂಕ್’ನಲ್ಲಿ ಅಗತ್ಯವಿರುವಷ್ಟು ಹಣವಿದೆ ಆದರೆ ನನಗೆ …

Read More »

ಯುವತಿಯ ಅತ್ಯಾಚಾರ-ಕೊಲೆ ಪ್ರಕರಣ, ಯುಪಿ ಪೊಲೀಸರ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು,- ಸಾಮೂಹಿಕ ಅತ್ಯಚಾರಕ್ಕೆ ಒಳಗಾಗಿ ಮಾರಣಾಂತಿಕ ಗಾಯಗಳಿಂದ ನರಳಿ ಜೀವ ಬಿಟ್ಟ ದಲಿತ ಯುವತಿಯ ಅಂತ್ಯಕ್ರಿಯೆಯನ್ನುಪೋಷಕರನ್ನು ಹೊರಗಿಟ್ಟು ನೆರವೇರಿಸಿದ ಪೊಲೀಸರ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಮ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್, ಶಾಸಕ ಡಾ.ಯತೀಂದ್ರ ಅವರು ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಿದ್ದರಾಮಯ್ಯ ಅವರು, ಟ್ವಿಟ್ ಮಾಡಿ, ಉತ್ತರ ಪ್ರದೇಶದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಗಂಭೀರವಾದದ್ದು. ದುರ್ಮರಣಕ್ಕೀಡಾದ ಯುವತಿಗೆ …

Read More »

ದರ್ಶನ್ ‘ಸಾರಥಿ’ಯಾದ ದಿನ- ಡಿ ಬಾಸ್‍ಗೆ ಈ ಸಿನಿಮಾ ಯಾಕಿಷ್ಟು ಮುಖ್ಯ?

ಬೆಂಗಳೂರು: ಬಹುತೇಕ ನಟ, ನಟಿಯರಿಗೆ ಒಂದು ಸಿನಿಮಾದಿಂದ ಟರ್ನಿಂಗ್ ಪಾಯಿಂಟ್ ಸಿಗುತ್ತದೆ. ಅಂತಹ ಸಿನಿಮಾಗಳು ಅವರ ಜೀವನದಲ್ಲಿ ಬೇಗ ಬರುಬಹುದು ಅಥವಾ ತಡವಾಗಿ ಬರಬಹುದು. ಅಂತಹ ಟರ್ನಿಂಗ್ ಪಾಯಿಂಟ್ ಸಿನಿಮಾಗಳಿಂದ ಅವರ ಸಂಪೂರ್ಣ ಕರೀಯರ್ ಬದಲಾಗುತ್ತದೆ. ಅಂತಹದ್ದೇ ಬದಲಾವಣೆ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಆಗಿದ್ದು, ಈ ಸಿನಿಮಾದಿಂದಾಗಿ. ದರ್ಶನ್ ಡಿ ಬಾಸ್ ಆಗಿ ಬೆಳೆದ ಬಗೆ ನಿಮಗೆ ತಿಳಿದೇ ಇದೆ. ದರ್ಶನ್ ಸಿನಿಮಾ ಕರೀಯರ್‍ನಲ್ಲಿ ಸಹ ಸಾಕಷ್ಟು ಏಳು, ಬೀಳುಗಳನ್ನು …

Read More »

ಸೋಂಕಿತರ ಜೊತೆ ವಾರಿಯರ್ಸ್ ಸಖತ್ ಸ್ಟೆಪ್ – ವಿಡಿಯೋ ವೈರಲ್

ಬಳ್ಳಾರಿ: ಕೊರೊನಾ ಹೆಮ್ಮಾರಿ ಬಂದ ತಕ್ಷಣ ಜನರೆಲ್ಲ ಒಂದು ರೀತಿಯಲ್ಲಿ ಜೀವನವೇ ಅಂತ್ಯವಾಯಿತು ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ಆದರೆ ಕೊರೊನಾ ರೋಗಿಗಳ ಮಾನಸಿಕ ಸ್ಥೈರ್ಯ ತುಂಬುವ ಸಲುವಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಸಖತ್ ಸ್ಟೆಪ್ ಹಾಕಿದ್ದಾರೆ. ಕೊರೊನಾ ಪೀಡಿತರು ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಇದ್ದು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹೀಗಾಗಿ ಅವರಲ್ಲಿ ಮಾನಸಿಕ ಧೈರ್ಯ ತುಂಬುವ ಸಲುವಾಗಿ ಬಳ್ಳಾರಿ ಟ್ರಾಮಾ ಕೇರ್ ಸೆಂಟರ್ ನಲ್ಲಿ ಆರೋಗ್ಯ ಇಲಾಖೆಯ …

Read More »

ಕೋಲು ಎಸೆದಿದ್ದಕ್ಕೆ ಬಾಲಕನ ಮೇಲೆ ದಾಳಿ ಮಾಡಿದ ನಾಯಿ.. ಎಲ್ಲಿ?

ನೆಲಮಂಗಲ: ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದಲ್ಲಿ ನಡೆದಿದೆ. ಶಫೀರ್ (11) ನಾಯಿಯಿಂದ ದಾಳಿಗೆ ಒಳಪಟ್ಟ ಬಾಲಕ. ರಸ್ತೆಯಲ್ಲಿ ನಿಂತಿದ್ದ ನಾಯಿಗೆ ಕೋಲು ಎಸೆದ ಕಾರಣ ರೊಚ್ಚಿಗೆದ್ದ ನಾಯಿ ಬಾಲಕನ ಮೇಲೆ ಪ್ರತಿ ದಾಳಿ ನಡೆಸಿದೆ. ಈ ವೇಳೆ ಬಾಲಕ ಶಫೀರ್​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಮಾದನಾಯಕನಹಳ್ಳಿ ಪೋಲಿಸ್ …

Read More »