ಹೈದರಾಬಾದ್: ತಂತ್ರಜ್ಞಾನವನ್ನು ಹೇಗೆಲ್ಲ ಉಪಯುಕ್ತವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಹೈದರಾಬಾದ್ನಲ್ಲಿ ನಡೆದ ಈ ಒಂದು ಘಟನೆ ತಅಜಾ ಉದಾಹರಣೆಯಾಗಿದೆ. ಅಮೆರಿಕದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಅಲ್ಲಿಂದಲೇ ಹೈದರಾಬಾದ್ನ ತನ್ನ ನಿವಾಸದಲ್ಲಿ ನಡೆಯುತ್ತಿದ್ದ ಕಳ್ಳತವನ್ನು ತಪ್ಪಿಸಿದ್ದು, ಖದೀಮನನ್ನು ಹಿಡಿದುಕೊಟ್ಟಿದ್ದಾರೆ. ಸೈಬರಾಬಾದ್ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಮಾನಿಟರ್ ಸೆನ್ಸಾರ್ ಸಾಧನ ಒಳಗೊಂಡ ಸಿಸಿಟಿವಿ ಕ್ಯಾಮೆರಾವನ್ನು ಮಾಲೀಕ ತನ್ನ ಮನೆಯಲ್ಲಿ ಅಳವಡಿಸಿದ್ದ. ಯಾರಾದರೂ ಮನೆಯ ಆಸುಪಾಸಿನಲ್ಲಿ …
Read More »ಲೆಕ್ಚರ್ ಹುದ್ದೆಗೆ 40 ಲಕ್ಷ ರೂಪಾಯಿ ಡೀಲ್!? ಮಾ.12ರಿಂದ 16ವರೆಗೆ ನೇಮಕಕ್ಕೆ ಪರೀಕ್ಷೆ
ಬೆಂಗಳೂರು :ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹಾಗೂ ಪೊಲೀಸ್ ನೇಮಕಾತಿಯಲ್ಲಿ ಕೇಳಿಬರುತ್ತಿದ್ದ ಅವ್ಯವಹಾರದ ಆರೋಪವೀಗ ಶಿಕ್ಷಣ ಇಲಾಖೆ ನೇಮಕಾತಿಗೂ ವ್ಯಾಪಿಸಿದೆ. 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಡೀಲ್ ಶುರುವಾಗಿದೆ! ತಲಾ ಹುದ್ದೆಗೆ 40 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಡೀಲ್ ಒಪ್ಪಿಕೊಂಡು ಮುಂಗಡ ಹಣ ಕೊಟ್ಟವರಿಗೆ ಹುದ್ದೆ ಫಿಕ್ಸ್ ಭರವಸೆ ನೀಡಲಾಗುತ್ತಿದೆ. ಮಾ.12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ. 33 ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ದಿನಾಂಕ …
Read More »ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ವಿಲ್! ತಂದೆ ಹೆಸರಲ್ಲಿ ವಿಲ್ ಸೃಷ್ಟಿಸಿ 50 ಕೋಟಿ ರೂ. ಆಸ್ತಿ ಕಬಳಿಸಿದ ಮಕ್ಕಳು
ಬೆಂಗಳೂರು: ತಂದೆ ಸಾವಿನ ಬಳಿಕ ಅವರ ಹೆಸರಿನಲ್ಲಿ ನಕಲಿ ವಿಲ್(ಉಯಿಲು ಪತ್ರ) ಸೃಷ್ಟಿಸಿ ಮಲತಾಯಿಗೆ ಸೇರಬೇಕಿದ್ದ 50 ಕೋಟಿ ಮೌಲ್ಯದ ಆಸ್ತಿಯನ್ನ ಮಕ್ಕಳಿಬ್ಬರು ಕಬಳಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಜಾಜಿನಗರದ ಕೆ. ಬೋಜಮ್ಮ (67) ಎಂಬುವರು ಕೊಟ್ಟ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸರು ಮಕ್ಕಳಿಬ್ಬರನ್ನು ಬಂಧಿಸಿದ್ದಾರೆ. ಚೆನ್ನಪ್ಪ ಅವರಿಗೆ ಲಕ್ಷ್ಮಮ್ಮ ಮತ್ತು ಬೋಜಮ್ಮ ಪತ್ನಿಯರು. ಮೊದಲ ಪತ್ನಿಗೆ ಸುರೇಶ್, ಮಹೇಶ್ ಸೇರಿ ಮೂವರು ಮಕ್ಕಳು. ಬೋಜಮ್ಮಗೆ ಒಬ್ಬ ಪುತ್ರನಿದ್ದಾನೆ. …
Read More »ಪೊಲೀಸ್ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಶೀಘ್ರವೇ 4000 ಪೊಲೀಸ್ ನೇಮಕ್ಕೆ ಅರ್ಜಿ – ಗೃಹ ಸಚಿವ ಅರಗ ಜ್ಞಾನೇಂದ್ರ
ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಲವರ್ಧನೆಗೆ ಪೊಲೀಸರ ನೇಮಕಾತಿ ( Karnataka Police Recruitment ), ನ್ಯಾಯ ವಿಜ್ಞಾನ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಅಲ್ಲದೇ ಶೀಘ್ರವೇ 4000 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಕಳೆದ ಐದು ವರ್ಷಗಳ …
Read More »ಯೂಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಪಘಾತ ಬೈಕ್ ಸವಾರನ ದುರ್ಮರಣ..!
ಡೀಸೇಲ್ ಹಾಕಿಸಿಕೊಳ್ಳಲು ಕ್ಯಾಂಟರ್ವೊಂದು ಯೂಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ಮುಕ್ತಿ ಮಠದ ಮುಂದಿರುವ ಪೆಟ್ರೋಲ್ ಪಂಪ್ ಮುಂದೆ ನಡೆದಿದೆ. ಬೆಳಗಾವಿ ತಾಲೂಕಿನ ಮುಕ್ತಿಮಠ ಬಳಿಯಿರುವ ಪೆಟ್ರೋಲ್ ಪಂಪಿನ ಕಡೆ ಕ್ಯಾಂಟರ್ ವೊಂದು ಯು ಟರ್ನ್ ತೆಗೆದುಕೊಂಡಿದ್ದಕ್ಕಾಗಿ ಭಾರಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದರೆ, ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಾಕತಿ ಪೆÇೀಲೀಸ್ ಠಾಣೆಯ …
Read More »ಖಾನಾಪೂರ ತಾಲೂಕಿನ ಕಣಕುಂಬಿಯಲ್ಲಿ ಮಳೆರಾಯನ ದರ್ಶನ
ಖಾನಾಪೂರ ತಾಲೂಕಿನ ಕಣಕುಂಬಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ನಿರಂತರ ಮಳೆಯಿಂದಾಗಿ ಜನರು ನಿಟ್ಟುಸಿರು ಬಿಟ್ಟರು. ಹೌದು ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚುಗಿಯೇ ಇದ್ದು, ಖಾನಾಪೂರ ತಾಲೂಕಿನ ಕಣಕುಂಬಿಯಲ್ಲಿ ಮಳೆರಾಯನೂ ಅರ್ಧ ಗಂಟೆಗೂ ಹೆಚ್ಚು ಸಮಯ ತನ್ನ ಆರ್ಭಟವನ್ನು ಮಾಡಿದ್ದಾನೆ ಬಿಸಿಲಿನ ತಾಪ ಒಂದು ಕಡೆ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ಕೂಡಾ ಮಳೆಯಿಂದ ಈ ಭಾಗದಲ್ಲಿ ತಂಪು ತಂಪು ಕೂಲ್ ಕೂಲ್ ಆಗಿದೆ.
Read More »ದಾಂಡೇಲಿಯಲ್ಲಿ ಮೊಸಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ದಾಂಡೇಲಿ ನಾಗರೀಕರಲ್ಲಿ ಭಯದ ವಾತಾವರಣ
ದಾಂಡೇಲಿಯಲ್ಲಿ ಮೊಸಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ದಾಂಡೇಲಿ ನಾಗರೀಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೌದು ಕಾಳಿನದಿಯಿಂದ ದೇಶಪಾಂಡೆ ನಗರದಲ್ಲಿ ಮೊಸಳೆ ರಸ್ತೆಯಲ್ಲಿ ಪತ್ತೆಯಾಗಿದ್ದು ಇದರ ಮಾಹಿತಿ ಅರಣ್ಯ ಇಲಾಖೆ ಮತ್ತು ಪೆÇೀಲಿಸ್ ಇಲಾಖೆ ನೀಡಿದ ತಕ್ಷಣ ಸ್ಥಳೀಯ ನಾಗರೀಕರ ಸಹಾಯದಿಂದ ಮೊಸಳೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬೀಡಲಾಗುವ ಮಾಹಿತಿ ಲಭ್ಯವಾಗಿದೆ.
Read More »ನಮ್ದು ಗಂಡಸರ ರಾಜ್ಯ, ಅದ್ಕೆ ರಾಜಸ್ಥಾನಕ್ಕೆ ರೇಪ್ನಲ್ಲಿ ಮೊದಲ ಸ್ಥಾನ -ಕಾಂಗ್ರೆಸ್ ಸಚಿವ ಧರಿವಾಲ್
ರಾಜಸ್ಥಾನದ ಕಾಂಗ್ರೆಸ್ ಮಂತ್ರಿ ಶಾಂತಿ ಕುಮಾರ್ ಧರಿವಾಲ್, ವಿಧಾನಸಭೆ ಕಲಾಪದ ವೇಳೆ ನಾಚಿಕೆಗೇಡಿನ ಹೇಳಿಕೆ ಕೊಟ್ಟು ಇದೀಗ ತಲೆತಗ್ಗಿಸಿದ್ದಾರೆ. ನಿನ್ನೆ ನಡೆದ ವಿಧಾನಸಭೆ ಕಲಾಪದ ವೇಳೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನ ಕೇಳಲಾಗಿತ್ತು. ಅದಕ್ಕೆ ಉತ್ತರಿಸುವ ವೇಳೆ, ‘ರೇಪ್ನಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿ ಇದೆ. ಯಾಕೆ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ..? ಯಾಕಂದರೆ ರಾಜಸ್ಥಾನ ಪುರಷರಿರುವ ರಾಜ್ಯ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ..?’ ಅನ್ನೋ ಮೂಲಕ ಬಾಲೀಶ ಹೇಳಿಕೆಯನ್ನ ನೀಡಿದ್ದಾರೆ. …
Read More »ನಾವು ರಾಜಕಾರಣಿಗಳು ಹಣ ತಿನ್ನುವುದು ನಿಲ್ಲಿಸೋಣ’: ಬಿಎಸ್ವೈ ಮೇಲೆ ಯತ್ನಾಳ ಪರೋಕ್ಷ ವಾಗ್ದಾಳಿ
ಹಣ ಲೂಟಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದು, ಇದರಿಂದ ಕರ್ನಾಟಕವು ಬಿಹಾರ ಆಗುವತ್ತ ಸಾಗುತ್ತಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಳವಳ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ‘ರಾಜ್ಯದಲ್ಲಿ ಕೆಲವು ಜಿಲ್ಲಾಧಿಕಾರಿ, ವಿಭಾಗಾಧಿಕಾರಿಗಳು ಲೂಟಿ ಮಾಡಿದ್ದಾರೆ. ಇದು ಸಾಧ್ಯವಾಗಿದ್ದು ಯಾರಿಂದ? ಮೊದಲಿಗೆ ನಾವು (ರಾಜಕಾರಣಿಗಳು) ತಿನ್ನುವುದು ನಿಲ್ಲಿಸಬೇಕು’ ಎಂದರು. ‘ವಿಧಾನಪರಿಷತ್ ಚುನಾವಣೆಯಲ್ಲಿ ₹ 25 ಕೋಟಿಯಿಂದ ₹ 50 ಕೋಟಿಗೂ ಹೆಚ್ಚು ಹಣ …
Read More »ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ನಿರಂತರ ಅತ್ಯಾಚಾರ: ಆರೋಪಿಗಳ ಬಂಧನ
ಬೆಂಗಳೂರು: ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ನಾಲ್ಕು ದಿನ ನಿರಂತರವಾಗಿ ಅತ್ಯಾಚಾರವೆಸಗಿದ್ದ ನಾಲ್ವರು ಹಾಗೂ ಸಹಕರಿಸಿದ ಇಬ್ಬರು ಮಹಿಳೆಯರನ್ನು ಎಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇಶವಮೂರ್ತಿ, ರಫೀಕ್, ಶರತ್, ಸತ್ಯರಾಜು ರಾಜೇಶ್ವರಿ ಹಾಗೂ ಕಲಾವತಿ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯು ಆರೋಪಿ ರಾಜೇಶ್ವರಿ ಬಳಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದಳು. ಜ್ಯೂಸ್ನಲ್ಲಿ ಪ್ರಜ್ಞೆ ತಪ್ಪಿಸುವ ಔಷಧಿ ಬೆರೆಸಿ ಕೊಟ್ಟಿದ್ದ ರಾಜೇಶ್ವರಿ ಆರೋಪಿ ಕೇಶವಮೂರ್ತಿ ಅತ್ಯಾಚಾರವೆಸಗಲು ಸಾಥ್ ನೀಡಿದ್ದಳು. ಪ್ರಜ್ಞೆ ಬಂದ …
Read More »
Laxmi News 24×7