Breaking News

ಶ್ರೀ ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ರಮಜಾನ್ ಹಬ್ಬದ ಪ್ರಯುಕ್ತ ಹಣ್ಣುಗಳ‌ ಕಿಟ್ ವಿತರಿಸಲಾಯಿತು.

Spread the love

ಕಿತ್ತೂರು (ಅಂಬಡಗಟ್ಟಿ): ಶ್ರೀ ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಸಮಾಜ ಸೇವಕ ಹಬೀಬ ಶಿಲ್ಲೇದಾರ ಅವರ ನೇತೃತ್ವದಲ್ಲಿ‌ ಕಿತ್ತೂರ ಮತ ಕ್ಷೇತ್ರದ ಮುಸ್ಲಿಂ ಸಮುದಾಯದವರಿಗೆ ರಮಜಾನ್ ಹಬ್ಬದ ಪ್ರಯುಕ್ತ ಹಣ್ಣುಗಳ‌ ಕಿಟ್ ವಿತರಿಸಲಾಯಿತು.
ಇಲ್ಲಿನ ಶ್ರೀ ಸತೀಶಣ್ಣಾ ಕಲ್ಯಾಣ ಮಂಟಪದಲ್ಲಿ ಕಿತ್ತೂರು ಮತ ಕ್ಷೇತ್ರದಲ್ಲಿ ರಮಜಾನ ಮಾಸದ ರೋಜಾ ಇದ್ದ ಮುಸ್ಲೀಂ ಸಮುದಾಯದ ಜನರಿಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಮುಖಾಂತರ 500 ಹಣ್ಣಿನ ಕಿಟಗಳನ್ನು ನೀಡಲಾಯಿತು.
ಈಗಾಗಲೇ ಸತೀಶಣ್ಣಾ ಗಾರ್ಮೆಂಟ್ಸ ಮುಖಾಂತರ ಕಿತ್ತೂ ಕ್ಷೇತ್ರದ ಜನರಿಗೆ ಮಾಸ್ಕ್ ಗಳನ್ನು ಮತ್ತು ರೇಷನ್ ಕಿಟ್ ಗಳನ್ನು ನೀಡಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ,ಕಾಂಗ್ರೇಸ ಪಕ್ಷದ ಮುಖಂಡಸುನೀಲ ಹನಮ್ಮನ್ನವರ ಉಪಸ್ಥಿತರಿದ್ದರು.

Spread the love

About Laxminews 24x7

Check Also

ನಾಳೆ ಕರೆ ನೀಡಿದ್ದ ಕಿತ್ತೂರು ಬಂದ್ ವಾಪಸ್…!!!! ಕೇವಲ ಮನವಿಗೆ ಸೀಮಿತವಾದ ಪ್ರತಿಭಟನೆ.

Spread the loveಕಿತ್ತೂರು: ಬಜೆಟನಲ್ಲಿ ಕಿತ್ತೂರು ಪ್ರಾಧಿಕಾರಕ್ಕೆ ಅನುದಾನವನ್ನು ನೀಡದ ಹಿನ್ನೆಲೆ ನಾಳೆ ಕರೆ ನೀಡಿದ್ದ ಕಿತ್ತೂರು ಬಂದ್’ನ್ನು ವಾಪಸ್ಸು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ