ಹೈದರಾಬಾದ್ : ನಮ್ಮ ದೇಶದಲ್ಲಿ ಹೆಚ್ಚಿನವರು ಐಎಎಸ್ ಅಧಿಕಾರಿ ಅಥವಾ ಇನ್ನಿತರ ಉನ್ನತ ಹುದ್ದೆ ಹೊಂದಬೇಕು ಎಂಬ ಕನಸು ಕಾಣುತ್ತಾರೆ. ಅದಕ್ಕಾಗಿ ಹಲವಾರು ವರ್ಷಗಳನ್ನು ವ್ಯಯಿಸುತ್ತಾರೆ. ಅದರಲ್ಲಿ ಕೆಲವರು ಯಶಸ್ವಿಯಾಗುತ್ತಾರೆ. ಇನ್ನು ಕೆಲವರು ಅದರಲ್ಲಿ ಸೋಲುತ್ತಾರೆ. ಅಂತಹ ಮಹಿಳೆಯ ಸ್ಟೋರಿ ನಿಮಗೆ ನೀಡುತ್ತಿದ್ದೇವೆ.
ಹೈದರಾಬಾದ್ ಮೂಲದ ಮಹಿಳೆಯೊಬ್ಬರು ಬಹುರಾಷ್ಟ್ರೀಯ ಕಂಪನಿಯಲ್ಲಿ ಎಚ್ಆರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಂಡು ಆ ಕೆಲಸವನ್ನು ತೊರೆಯುತ್ತಾರೆ. ಆದರೆ ತನ್ನ ಆಸೆ ಈಡೇರದ ಕಾರಣ ಅವರು ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಮಾನಸಿಕ ಅಸ್ವಸ್ಥರಾಗಿ ಮನೆಯನ್ನು ತೊರೆಯುತ್ತಾರೆ. ಮನೆಯವರು ಹುಡುಕಿದರೂ ಅವರ ಪತ್ತೆ ಇರಲಿಲ್ಲ. 8 ತಿಂಗಳ ಹಿಂದೆ ಮನೆಯಿಂದ ಹೊರಟುಹೋದ ಈ ಮಹಿಳೆ ಇಂದುಬೀದಿಯಲ್ಲಿ ಕಸವನ್ನು ಹೆಕ್ಕುತ್ತಿದ್ದಾಳೆ ಎಂಬುದು ಸ್ಪಷ್ಟವಾಗಿದೆ.
ಹೈದರಾಬಾದ್ ನಿಂದ ಸುಮಾರು ಒಂದೂವರೆ ಸಾವಿರ ಕಿಲೋಮೀಟರ್ ದೂರದಲ್ಲಿರುವ ಯುಪಿಯ ಗೋರಖ್ಪುರವನ್ನು ಈ ಮಹಿಳೆ ತಲುಪಿದ್ದು ಅವರನ್ನು ನೋಡಿದ ಜನರು ಆಕೆಯನ್ನು ನೋಡಿ ಮರುಗಿದ್ದಾರೆ.
ಹಿಂದೂಸ್ತಾನ್ ಸುದ್ದಿಯ ಪ್ರಕಾರ, ಜುಲೈ 23 ರಂದು ವಾರಂಗಲ್ನ ರಜನಿ ತೋಪಾ ಎಂಬವರು ಅವರು ಗೋರಖ್ಪುರದ ತಿವಾರಿಪುರ ಪೊಲೀಸ್ ಠಾಣೆ ಬಳಿ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಡಸ್ಟ್ಬಿನ್ ಬಳಿ ಎಸೆಯಲ್ಪಟ್ಟ ಒಣಗಿದ ಅನ್ನವನ್ನು ತಿನ್ನುತ್ತಿದ್ದರು. ಇದನ್ನು ನೋಡಿದ ಜನರು ಅಲ್ಲಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದಾಗ, ಮಹಿಳೆ ಉತ್ತಮ ಇಂಗ್ಲಿಷ್ ಮಾತನಾಡಿದ್ದು, ಬಳಿಕ ಪೊಲೀಸರು ಅವರನ್ನು ಮಾತೃಚಾಯ ಚಾರಿಟಬಲ್ ಫೌಂಡೇಶನ್ಗೆ ಹಸ್ತಅಂತರಿಸಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು ಈಗ ಅವರ ಪರಿಸ್ಥಿತಿ ಸುಧಾರಿಸುತ್ತಿದೆ.
ರಜನಿ ಅವರ ತಂದೆಯವರು, ಅವರ ಮಗಳು 2000 ರಲ್ಲಿ ಪ್ರಥಮ ದರ್ಜೆಯಿಂದ ಎಂಬಿಎ ಉತ್ತೀರ್ಣಳಾಗಿದ್ದಾಳೆ ಎಂದು ಪ್ರತಿಷ್ಠಾನದ ಅಧಿಕಾರಿಗಳಿಗೆ ತಿಳಿಸಿದರು. ಐಎಎಸ್ ಆಗಬೇಕೆಂಬುದು ಅವಳ ಕನಸಾಗಿತ್ತು, ಆದರೆ ಎರಡು ಬಾರಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ನಂತರ ಅವಳು ಖಿನ್ನತೆಗೆ ಒಳಗಾದಳು. ಈಗ ರಾಜನಿಯವರ ಮೆದುಳಿನ ಸಮತೋಲನ ತಪ್ಪಿದೆ. ಅವರು ನವೆಂಬರ್ನಲ್ಲಿ ಮನೆ ತೊರೆದರು. ಅವರ ಅರೋಗ್ಯ ಸುಧಾರಣೆಯ ಬಳಿಕ ರಜನಿ ತನ್ನ ಕುಟುಂಬದ ಬಗ್ಗೆ ಮಾಹಿತಿ ನೀಡಿದರು.