Breaking News

ಸೋದರತ್ತೆಯೊಂದಿಗೆ ಅಕ್ರಮ ಸಂಬಂಧ – ಯುವಕನನ್ನು ಕೊಂದು ನೇಣು ಹಾಕಿದ ಪತಿ

Spread the love

ಚಾಮರಾಜನಗರ: ವಿವಾಹೇತರ ಸಂಬಂಧ ಕಾರಣಕ್ಕೆ ಯುವಕನೊಬ್ಬನನ್ನು ಕೊಂದು ನೇಣು ಹಾಕಿಕೊಂಡಿದ್ದಾನೆ ಎಂದು ಬಿಂಬಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲದಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಕಂಡಯ್ಯನಪಾಲ್ಯದ ಪ್ರಕಾಶ್ (30) ಕೊಲೆಯಾದ ವ್ಯಕ್ತಿ. ಪ್ರಕಾಶ್ ವಾರಿಗೆಯಲ್ಲಿ ಸೋದರತ್ತೆಯಾಗುವ ಶಿವನ ಸಮುದ್ರದ ಲಕ್ಷ್ಮೀ ಎಂಬಾಕೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ಪತಿ ಮನೆಯವರಿಗೆ ತಿಳಿದು 5 ದಿನಗಳ ಹಿಂದೆ ತಮ್ಮ ಕೋಮಿನ ಪಂಜಾಯ್ತಿ ಕರೆದು ತೀರ್ಮಾನ ಮಾಡಿದ್ದರು ಎಂದು ತಿಳಿದು ಬಂದಿದೆ.

ಪಂಚಾಯ್ತಿಯಲ್ಲಿ ಪ್ರಕಾಶನ ಜೊತೆಯೇ ಇರುವುದಾಗಿ ಲಕ್ಷ್ಮಿ ತಿಳಿಸಿದ್ದರಿಂದ 3 ಲಕ್ಷ ರೂ. ದಂಡವನ್ನು ನೀಡಿ ವಿವಾಹ ಮಾಡಿಕೊಳ್ಳುವಂತೆ ಕೋಮಿನ ಯಜಮಾನರು ತೀರ್ಪು ನೀಡಿದ್ದರು. ಜೊತೆಗೆ ಹಣ ಕೊಡುವ ತನಕ ಗುಂಡೇಗಾಲದಲ್ಲೇ ಇರುವಂತೆ ಮನೆಯೊಂದರಲ್ಲಿ ಕೂಡಿ ಹಾಕಿದ್ದರು ಎನ್ನಲಾಗಿದೆ. ಪ್ರಕಾಶ್‍ನ ಮನೆಯವರು ಹಣ ಹೊಂದಿಸುತ್ತಿರುವ ವಿಚಾರ ತಿಳಿದು ಲಕ್ಷ್ಮಿಯ ಗಂಡ ಕಾಂತರಾಜು ಮತ್ತು ಸಂಬಂಧಿಕರಾದ ರತ್ನಮ್ಮ, ನಿಂಗರಾಜು, ಸುನೀಲ್ ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಪ್ರಕಾಶ್‍ನ ತಾಯಿ ಮಂಜುಳಾ ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಿಯತಮೆ ಲಕ್ಷ್ಮಿಯೂ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ರಾಹುಲ್ ಜಾರಕಿಹೊಳಿ ಆಯ್ಕೆ: ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಕೆ

Spread the love ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ರಾಹುಲ್ ಜಾರಕಿಹೊಳಿ ಆಯ್ಕೆ: ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಕೆ ಕರ್ನಾಟಕ ರಾಜ್ಯ ಸಹಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ