Home / ಜಿಲ್ಲೆ / ಬೆಳಗಾವಿ / ಬೃಹತ್ ಹಳದಿ ಕುಂಕುಮ ಕಾರ್ಯಕ್ರಮ : ಶಾಸಕ ಅನಿಲ ಬೆನಕೆ ಬಾಗಿ

ಬೃಹತ್ ಹಳದಿ ಕುಂಕುಮ ಕಾರ್ಯಕ್ರಮ : ಶಾಸಕ ಅನಿಲ ಬೆನಕೆ ಬಾಗಿ

Spread the love

ಬೆಳಗಾವಿ :ಬೆಳಗಾವಿ ನಗರದ ಬಸವಣಕುಡಚಿಯಲ್ಲಿ ಮಂಗಳವಾರದAದು ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ಬೃಹತ್ ಹಳದಿ ಕುಂಕುಮ ಕಾರ್ಯಕ್ರಮಆಯೋಜನೆ ಮಾಡಲಾಗಿತ್ತು.ಬಸವಣಕುಡಚಿಗ್ರಾಮದ ಬಸವಣ್ಣ ಮಂದಿರಆವರಣದಲ್ಲಿಆಯೋಜನೆ ಮಾಡಲಾದಕಾರ್ಯಕ್ರಮದಲ್ಲಿಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನುದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆರವರು ನಾನು ಶಾಸಕನಾಗುವ ಮುಂಚೆಯಿAದಲೂ ಬಸವಣಕುಡಚಿಜನ ನನ್ನ ಮೇಲೆ ತುಂಬಾ ಪ್ರೀತಿ ವಿಶ್ವಾಸವನ್ನುಇಟ್ಟಿದ್ದು, ೨೦೧೮ ರಚುನಾವಣೆಗೆ ನಾನು ಸ್ಪರ್ದೆ ಮಾಡಿದಾಗಲೂ ನನಗೆ ಪ್ರತಿಶತ ೧೦೦% ರಷ್ಟು ಮತದಾನ ಮಾಡಿದ ಫಲವಾಗಿ ನಾನು ಶಾಸಕನಾಗಿದ್ದೇನೆಎಂದಅವರು ನಿಮ್ಮ ಪ್ರೀತಿ ವಿಶ್ವಾಸವು ನನ್ನ ಮೇಲೆ ಹೀಗೆಯೆಇರಲಿ ಎಂದರು. ನಾನು ಶಾಸಕನಾದ ಮೇಲೆ ಬಸವಣಕುಡಚಿಯಲ್ಲಿ ೧ ಕೋಟಿ ವೆಚ್ಚದಲ್ಲಿ ಹೊಲಗಳಿಗೆ ಸಂಪರ್ಕಕಲ್ಪಿಸುವಬ್ರಿಡ್ಜ್ ನಿರ್ಮಾಣ, ಕನ್ನಡ ಮತ್ತು ಮರಾಠಿ ಶಾಲೆಗಳ ನಿರ್ಮಾಣ, ೧೫ ಲಕ್ಷ ವೆಚ್ಚದಲ್ಲಿಅಂಗನವಾಡಿ ನಿರ್ಮಾಣ,೨೦ ಲಕ್ಷ ವೆಚ್ಚದಲ್ಲಿ ಸ್ಮಶಾನ ನಿರ್ಮಾಣ, ಗ್ರಾಮದಲ್ಲಿ ೧ಕೋಟಿಗೂ ಅಧಿಕ ವೆಚ್ಚದಲ್ಲಿರಸ್ತೆ ಮತ್ತುಗಟಾರು ನಿರ್ಮಾಣ, ದೇವರಾಜಅರಸ ಕಾಳೋನಿಯಲ್ಲಿ ೩ ಕೊಟಿಗೂಅಧಿಕ ವೆಚ್ಚದಲ್ಲಿರಸ್ತೆಕಾಮಗಾರಿಕೈಗೊಂಡಿದ್ದು, ಕರ್ನಾಟಕ ಹೌಸಿಂಗ ಬೋರ್ಡನಲ್ಲಿರಸ್ತೆ, ಬೀದಿ ದೀಪ ಅಳವಡಿಕೆ ಸೇರಿದಂತೆಒಟ್ಟಾರೆಯಾಗಿಗ್ರಾಮದಲ್ಲಿ ಸುಮಾರು ೧೦ ಕೋಟಿಗೂ ಹೆಚ್ಚು ಅಭಿವೃಧ್ದಿಕಾಮಗಾರಿಗಳನ್ನು ಕೈಗೊಂಡಿದ್ದೇನೆಎAದು ಮಾಹಿತಿ ನೀಡಿದರು.

ಬಸವಣಕುಡಚಿಯಲ್ಲಿ ಮಹಿಳೆಯರಿಗಾಗಿ ಆರೋಗ್ಯಕೆಂದ್ರ ಸ್ಥಾಪನೆಗೆ ಹಣ ಬಿಡುಗಡೆಆಗಿದ್ದು, ಕಟ್ಟಡ ನಿರ್ಮಾಣಕ್ಕೆಜಮೀನುಅವಶ್ಯಕವಿರುವುದರಿಂದ ಬಸವಣಕುಡಚಿಯಲ್ಲಿಜಮೀನು ಸಿಕ್ಕ ತಕ್ಷಣಆರೋಗ್ಯಕೇಂದ್ರ ಸ್ಥಾಪನೆ ಮಾಡಲಾಗುವುದುಎಂದರು. ಬರುವ ದಿನಗಳಲ್ಲಿ ಮಹಿಳೆಯರು ಸ್ವಾವಲಂಭಿ ಆಗಬೇಕು ಅದಕ್ಕಾಗಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದರು. ನಾನು ಇಂದುಯಾವುದೇಆಮೀಶವನ್ನು ನೀಡಿಲ್ಲಆದರೂಸಾವಿರಾರು ಮಹಿಳೆಯರು ಇಂದು ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಬಂದಿದ್ದು, ತುಂಬಾ ಸಂತೋಷಆಗಿದ್ದು ನಿಮ್ಮ ಆಶಿರ್ವಾದ ನನ್ನ ಮೇಲೆ ಇರಲಿಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಸೇವಕರಾದ ಬಸವರಾಜ ಮೋದಗೇಕರ, ಲಕ್ಷಿö್ಮ ಮೋದಗೇಕರ, ಸಮಾಜ ಸೇವಕಿ ಸುವರ್ಣಾ ಬೇಡಕಾ, ರಾಧಿಕಾ ಮೂತಗೇಕರ, ಸುನಂದಾ ಮುನ್ನೋಳ್ಳಿ, ರೇಖಾ ಸೂರ್ಯವಂಶಿ, ವೈಶಾಲಿ ಏಕನೇಕರ, ಸುಜಾತಾ ಚೌಗುಲೆ, ನಿರ್ಮಲಾಗಿರಿ, ರೂಪಾ ಚೌಗುಲಾ, ಕಾಂಚನ ದಿವಟೆ, ಮಂಜುಳಾ ಬೆಕ್ಕಡಿ, ಜ್ಯೋತಿ ಬೇಡಕಾ, ರಜನಿ ಮೋದಗೇಕರ, ಜೈಶೀಲಾ ದೇಸಾಯಿ ಸೇರಿಂದತೆ ಸಾವಿರಾರು ಮಹಿಳೆಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ