ನಡೆಯುವ ಅಧಿವೇಶನದ ಸಮಯವನ್ನು ಇಂದೆ ಚರ್ಚೆಗೆ ತಗೆದುಕೋಳ್ಳಲಾಗುವದು ಎಂದು ಶಾಸಕ ಎ ಎಸ್ ನಡಹಳ್ಳಿ ಹೇಳಿದರು.
ಅವರು ಇಂದು ಸುವರ್ಣಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ನಾಳೆ ಒಂದು ದಿನ ಅಧಿವೇಶನ ಮೊಟಕು ಆಗಲಿದೆ, ಅಮಿತ್ ಶಾ ಬರುವಿಕೆಗಾಗಿ ಅಲ್ಲಾ ಹಾಗಾದರೆ ನಾಳೆ ವಿಜಯಪುರದಲ್ಲಿ ಕಾಂಗ್ರೆಸ್ ಸಮಾವೇಶವಿದೆ. ನಾಳಿನ ಸಮಯ ಇವತ್ತೇ ಚರ್ಚೆಗೆ ತೆಗೆದುಕೊಳ್ತಾರೆ ನಾಳಿನ ಸಮಯ ಇವತ್ತು ಯುಟಿಲೈಸ್ ಮಾಡಿಕೊಳ್ತೇವೆ ಎಂದುಬಿಜೆಪಿ ಶಾಸಕ ನಡಹಳ್ಳಿ ಹೇಳಿದರು.
ನಿನ್ನೆ ಉತ್ತರಕರ್ನಾಟಕದ ಸಮಸ್ಯೆ ಆಗಬೇಕಿತ್ತು, ಸ್ಪೀಕರ್, ಪ್ರತಿಪಕ್ಷ ನಾಯಕರಿಗು ನಾನು ಮನವಿ ಮಾಡಿದೆ, ಪ್ರತಿಬಾರಿ ಮೊದಲ ದಿನವೇ ಚರ್ಚೆಯಾಗಬೇಕು, ಪಕ್ಷಾತೀತವಾಗಿ ಅದರ ನಿರ್ಣಯ ತೆಗೆದುಕೊಳ್ಬೇಕು ಉತ್ತರಕರ್ನಾಟಕದ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕು. ಸದನದಲ್ಲಿ ಚರ್ಚೆ ಮಾಡಿ ನೀಲನಕ್ಷೆ ಚರ್ಚಿಸಬೇಕು. ಈ ಭಾಗದ ಸಮಸ್ಯೆ ಚರ್ಚೆಗೆ ನಾವು ನಿರೀಕ್ಷೆ ಇಟ್ಟುಕೊಂಡಿದ್ದೆವು. ಪ್ರತಿಪಕ್ಷ ನಾಯಕರು ಬಾದಾಮಿಯವರು ಇದರ ಬಗ್ಗೆ ಅವಕಾಶ ಮಾಡಿಕೊಡಬೇಕಿತ್ತು. ಈ ಭಾಗದ ಸಮಸ್ಯೆ ಚರ್ಚೆಗೆ ನಾವು ಶಕ್ತರಾಗಲಿಲ್ಲ ನಮ್ಮನಿರುತ್ಸಾಹವೂ ಇದೆ ಇಲ್ಲ ಎನ್ನಲ್ಲ. ಹುಬ್ಬಳ್ಳಿ ವಿಮಾನನಿಲ್ದಾಣ ಮೇಲ್ದೆರ್ಜೆಗೆ ಏರಬೇಕು ಈ ಭಾಗದಲ್ಲಿ ಕಾರ್ಗೋ ವಿಮಾನ ಸಂಚಾರ ಆಗಬೇಕು.