Breaking News

ಇಬ್ಬರು ಯುವಕರನ್ನು‌ ಕೊಚ್ಚಿ ಕೊಲೆ

Spread the love

ಬೆಳಗಾವಿ: ರಾತ್ರಿ ಕ್ರಿಕೆಟ್ ಆಟ ಆಡಿ ಹೋಗುವಾಗ ಇಬ್ಬರು ಯುವಕರನ್ನು‌ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಶಿಂಧೋಳ್ಳಿ ಗ್ರಾಮದಲ್ಲಿ ರವಿವಾರ(ಡಿ. 25) ರಾತ್ರಿ ನಡೆದಿದೆ.

ಶಿಂಧೋಳ್ಳಿ ಗ್ರಾಮದ ಬಸವರಾಜ ಮಾರುತಿ ಬೆಳಗಾಂವಕರ(24) ಹಾಗೂ ಗಿರೀಶ ಯಲ್ಲಪ್ಪ ನಾಗುನ್ನವರ(24) ಮೃತಪಟ್ಟ ಯುವಕರು.

 

ರವಿವಾರ ರಾತ್ರಿ ಕ್ರಿಕೆಟ್ ಆಡಿ ಹೊರಟ ಯುವಕರನ್ನು ಅಪರಿಚಿತರು ಬಂದು ಹೊಡೆದಿದ್ದು, ಈ ಪರಿಣಾಮ ಬಸವರಾಜ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಿರೀಶನನ್ನು ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಿಸದೇ ರಾತ್ರಿ ಮೃತಪಟ್ಟಿದ್ದಾನೆ.

ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಹೊನಲು ಬೆಳಕಿನ ಹಾಪ್‌ಪಿಚ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಯುವಕರು ರವಿವಾರ ರಾತ್ರಿ ಕ್ರಿಕೆಟ್ ಆಟ ಆಡಿ ಹೊರಟಿದ್ದರು. ಯಾರೋ ಯುವಕರು ಬಂದು ಹೊಡೆದಿದ್ದಾರೆ. ಕೊಲೆಗೆ ನಿಖರ ಕಾರಣ ಖಚಿತವಾಗಿಲ್ಲ.

ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮಾರೀಹಾಳ ಠಾಣೆ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.‌ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ