Breaking News

ಬಳ್ಳಾರಿಯ ಗುಡ್ಡವೊಂದರಲ್ಲಿ ಪತ್ತೆಯಾಗಿದ್ದ ತಲೆಬುರುಡೆಯ ನಿಗೂಢ ಪ್ರಕರಣ ಭೇದಿಸಿದ ಪೊಲೀಸರು!

Spread the love

ಬಳ್ಳಾರಿ: ಮಾರ್ಚ್‌ 19 ರಂದು ಕಂಪ್ಲಿ ತಾಲೂಕಿನ ವಿಠ್ಠಲಾಪುರದ ಗುಡ್ಡದಲ್ಲಿ ಪತ್ತೆಯಾಗಿದ್ದ ಅನಾಮಧೇಯ ವ್ಯಕ್ತಿಯ ತಲೆಬುರುಡೆ ಪ್ರಕರಣವನ್ನು ಬಳ್ಳಾರಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಲೆ ಬುರುಡೆ, ಶರ್ಟ್ ಆಧಾರದ ಮೇಲೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಮಾರ್ಚ್‌ 19 ರಂದು ಕಂಪ್ಲಿ ತಾಲೂಕಿನ ವಿಠ್ಠಲಾಪುರದ ಗುಡ್ಡದಲ್ಲಿ ಕೊಲೆ ನಡೆದಿತ್ತು. ಜೇರ್ವಗಿ ತಾಲೂಕಿನ ಬಳ್ಳಂಡುಗಿ ತಾಲೂಕಿನ ಅಮರೇಶ ಕೊಲೆಯಾಗಿದ್ದ ವ್ಯಕ್ತಿ.

ಅಮರೇಶ ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಇಂದಿರಾ ಪ್ಲಾಂಟ್​ನಲ್ಲಿ ಹಮಾಲಿ‌ ಕೆಲಸ ಮಾಡುತ್ತಿದ್ದ. ಶರ್ಟ್ ಆಧಾರದ ಮೇಲೆ ಗಂಗಾವತಿಯ ರಾಯಲ್ ಟೈಲರ್​ನಲ್ಲಿ ಪೊಲೀಸರು ಸಾಕ್ಷಿ ಸಂಗ್ರಹಿಸಿದ್ದರು. ಅನಾಮಧೇಯ ಶವ ಪತ್ತೆಯಾದ ಬಗ್ಗೆ ಕಂಪ್ಲಿ ಪೊಲೀಸರು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದರು. ಕಂಪ್ಲಿ ಪೊಲೀಸರ ಪ್ರಕಟಣೆ ಕಂಡು ಅಮರೇಶ ನಾಪತ್ತೆ ಬಗ್ಗೆ ಕುಟುಂಬಸ್ಥರು ಸುಳಿವು ನೀಡಿದ್ದರು. ಬಳಿಕ ಶರ್ಟ್. ತೆಲೆ ಬರುಡೆ, ಕೊರಳ ಚೈನ್ ಆಧಾರದ ಮೇಲೆ ಕೊಲೆಯಾದ ವ್ಯಕ್ತಿಯ ಗುರುತನ್ನು ಕುಟುಂಬಸ್ಥರು ಪತ್ತೆ ಮಾಡಿದ್ದರು.

ಹಲವು ಸಾಕ್ಷಿ ಆಧಾರದ ಮೇಲೆ ಕಿರಣಕುಮಾರ್ ಹಾಗೂ ರೇವಣಸಿದ್ದ ಎಂಬುವರನ್ನು ಪೊಲೀಸರು ಬಂಧಿಸಿದ್ದು, ತೆಲೆ ಮರೆಸಿಕೊಂಡಿರುವ ಮಲ್ಲಯ್ಯ, ಸಂಗಣ್ಣಗೆ ಪೊಲೀಸರ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಆರೋಪಿ ಕಿರಣ ಕುಮಾರ್ ತಂಗಿಯನ್ನ ಚುಡಾಯಿಸಿದಕ್ಕೆ ಅಮರೇಶನನ್ನು ಆರೋಪಿಗಳು ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ. ಮಾರ್ಚ್ 28 ರಂದು ಕಂಪ್ಲಿ ಪೊಲೀಸ್​ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು.


Spread the love

About Laxminews 24x7

Check Also

ಕಬ್ಬು ಬೆಳೆಗಾರರ ಜೊತೆ ಸಚಿವರ ಸಂಧಾನ ಸಭೆ ವಿಫಲ: ಮಿನಿಸ್ಟರ್​​ ಕಾರಿಗೆ ರೈತರ ಮುತ್ತಿಗೆ

Spread the loveಚಿಕ್ಕೋಡಿ, ಬೆಳಗಾವಿ: ಕಳೆದ ಏಳು ದಿನಗಳಿಂದ ನಡೆದಿರುವ ಕಬ್ಬು ಬೆಳೆಗಾರರ ಹೋರಾಟ ಕೊನೆಗೊಳಿಸಲು ಸರ್ಕಾರದ ಪರವಾಗಿ ಕಾನೂನು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ