Breaking News
Home / ರಾಜಕೀಯ / ರೇಣುಕಾಚಾರ್ಯ ಸೇವೆಗೆ ಭಾವುಕರಾದ ಜನ: ಕಾಲಿಗೆ ಹೂ ಸುರಿದು ನಮಸ್ಕರಿಸಿದ್ರು

ರೇಣುಕಾಚಾರ್ಯ ಸೇವೆಗೆ ಭಾವುಕರಾದ ಜನ: ಕಾಲಿಗೆ ಹೂ ಸುರಿದು ನಮಸ್ಕರಿಸಿದ್ರು

Spread the love

ದಾವಣಗೆರೆ: ಕೊರೊನಾ ಸಮಯದಲ್ಲಿ ಜಿಲ್ಲೆಯಲ್ಲಿ ಶಾಸಕ ರೇಣುಕಾಚಾರ್ಯ ಮಾಡಿರೋ ಕೆಲಸಗಳು, ಸಹಾಯಗಳ ಲೆಕ್ಕ ಅಷ್ಟಿಷ್ಟಲ್ಲ. ತಾವೇ ಸ್ವತಃ ಹೋಗಿ ಕೊರೊನಾ ಸೋಂಕಿತರಿಗೆ ಸೇವೆ ಮಾಡಿದ್ರು. ಇದರ ಫಲಶೃತಿಯಾಗಿ ಕೋವಿಡ್ ಗುಣಮುಖರಾದವ್ರು ಶಾಸಕ ರೇಣುಕಾಚಾರ್ಯರ ಕಾಲಿಗೆ ಹೂ ಸುರಿದು ಧನ್ಯವಾದ ಹೇಳಿದ್ದಾರೆ.

ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಕೋವಿಡ್​ ಗುಣಮುಖರು ಈ ರೀತಿ ಮಾಡಿದ್ದಾರೆ. ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ 27 ಜನ ಕೊರೊನಾದಿಂದ ಗುಣಮುಖರಾಗಿದ್ರು, ಈ ವೇಳೆ ಎಲ್ಲರ ಮೇಲೂ ಹೂ ಎರಚುವ ಮೂಲಕ ಶಾಸಕ ರೇಣುಕಾಚಾರ್ಯ ಬೀಳ್ಕೊಡುತ್ತಿದ್ದರು. ಈ ವೇಳೆ ಕೋವಿಡ್ ಗುಣಮುಖರು ಶಾಸಕರ ಪಾದಕ್ಕೆ ಹೂ ಸುರಿದು ನಮಸ್ಕಾರ ಮಾಡಿದ್ದಾರೆ. ಅಲ್ಲದೇ ಕೋವಿಡ್ ಕೇರ್ ಬಿಟ್ಟು ಹೋಗುವಾಗ ಗುಣಮುಖರು ಭಾವುಕರಾಗಿದ್ದರು.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ