Breaking News

ರಾಜ್ಯಾದ್ಯಂತ ಇಂದಿನಿಂದ ಹೋಟೆಲ್ ಊಟ, ತಿಂಡಿಗಳು ದುಬಾರಿ

Spread the love

ಬೆಂಗಳೂರು : ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಹೋಟೆಲ್ ಊಟ, ತಿಂಡಿಗಳು ದುಬಾರಿಯಾಗಲಿವೆ.

ಇಂಧನ ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ಮುಂದಾಗಿರುವಂತ ಹೋಟೆಲ್ ಮಾಲೀಕರ ಸಂಘವು ಇಂದಿನಿಂದ ಹೋಟೆಲ್ ಖಾದ್ಯಗಳ ಬೆಲೆ ಏರಿಕೆಯನ್ನು ( Hotel Food Price Hike ) ಮಾಡೋದಕ್ಕೆ ಮುಂದಾಗಿದೆ.

ಇದಕ್ಕೆ ಕಾರಣ ಒಂದೆಡೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾದ್ರೇ.. ಮತ್ತೊಂದೆಡೆ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ. ಮಗದೊಂದೆಡೆ ಅಡುಗೆ ಎಣ್ಣೆ ದುಬಾರಿ. ಈ ಎಲ್ಲಾ ಕಾರಣದಿಂದಾಗಿ ನಾಳೆಯಿಂದ ಹೋಟೆಲ್ ತಿಂಡಿ-ಊಟದ ಬೆಲೆ ಏರಿಕೆಯಾಗಿ, ಗ್ರಾಹಕರ ಜೇಬಿಗೆ ಬರೆ ಬೀಳಲಿದೆ.

ಕರ್ನಾಟಕ ರಾಜ್ಯ ಹೊಟೆಲ್ ಗಳ ಸಂಘ ಇಡ್ಲಿ, ಪೂರಿ, ಪೊಂಗಲ್, ಪಲಾವ್, ಟೊಮ್ಯಾಟೊ ಬಾತ್, ಮಸಾಲೆ ದೋಸೆ, ಈರುಳ್ಳಿ ದೋಸೆ,ಊಟ, ಅನ್ನ ಸಾರು ಸೇರಿ ವಿವಿಧ ಬಗೆಯ ಊಟ, ತಿಂಡಿಗಳ ಮೇಲೆ 5 ರೂ. ಹಾಗೂ ಮಿನಿ ಕಾಫಿ ಸೇರಿ ಸಣ್ಣ ಪದಾರ್ಥಗಳ ಮೇಲೆ 1-2 .ರೂ ಹೆಚ್ಚಳ ಮಾಡಿದೆ.


Spread the love

About Laxminews 24x7

Check Also

ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..!

Spread the loveಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! ಉತ್ತರ ಪ್ರದೇಶದ ಬದೋಹಿಯಲ್ಲೊಂದು ಪುಟ್ಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ